ಮಡಿಕೇರಿ: ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ತಡೆಗೋಡೆ ಉಬ್ಬಿ ನಿಂತಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಾತ್ಕಾಲಿಕವಾಗಿ ಬಂದ್ ಆಗಿದೆ.
30 ಮೀಟರ್ ಎತ್ತರ ಮತ್ತು 150 ಮೀಟರ್ ಉದ್ದದ ತಡೆಗೋಡೆಯ ಸಿಮೆಂಟ್ ಬ್ಲಾಕ್ ಗಳು ಉಬ್ಬಿ ನಿಂತಿವೆ.
ಸಿಮೆಂಟ್ ಬ್ಲಾಕ್ ಗಳ ಉಬ್ಬುವಿಕೆಯಿಂದ ರಾಷ್ಟ್ರೀಯ ಹೆದ್ದಾರಿ ಎದುರಿನ ಅಂಗಡಿ ಮಳಿಗೆಗಳು ಮತ್ತು ನಿವಾಸಿಗಳಿಗೆ ತೀವ್ರ ಆತಂಕ ಎದುರಾಗಿದೆ.
ತಡೆಗೋಡೆ ಕುಸಿದರೆ ಜಿಲ್ಲಾಧಿಕಾರಿ
ಕಚೇರಿಗೆ ಭಾರೀ ಅಪಾಯ ಎದುರಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಕೂಡಾ ಕೊಚ್ಚಿ ಹೋಗುವ ಸಾಧ್ಯತೆ ಇದೆ.
ತಡೆಗೋಡೆ ಬ್ಲಾಕ್ ಉಬ್ಬಿರುವ ಕಾರಣ ವಾಹನಗಳಿಗೆ ಮೇಕೇರಿ-ಅಪ್ಪಂಗಳ-ತಾಳತ್ ಮನೆ ಬದಲಿ ರಸ್ತೆಯಲ್ಲಿ ಸಂಚರಿಸಿ ಮಂಗಳೂರು ರಸ್ತೆಗೆ ಸೇರಲು ಅವಕಾಶ ಕಲ್ಪಿಸಲಾಗಿದೆ.
ಡಿಸಿ ಕಚೇರಿಯ ತಡೆಗೋಡೆ ಅತ್ಯಾಧುನಿಕ ರೀ ಎನ್ ಫೋರ್ಸ್ ಮೆಂಟ್ ಅರ್ತ್ ರಿಟೇನ್ ವಾಲ್ ಆಗಿದ್ದು, ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.