Saturday, May 18, 2024
Homeಕರಾವಳಿಗಲ್ಫ್ ನಿಂದ ಯುವಕನನ್ನು ಊರಿಗೆ ಕರೆಸಿ ಕೊಲೆ ಮಾಡಿದ ದುಷ್ಕರ್ಮಿಗಳು: ಕೊಂದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ...

ಗಲ್ಫ್ ನಿಂದ ಯುವಕನನ್ನು ಊರಿಗೆ ಕರೆಸಿ ಕೊಲೆ ಮಾಡಿದ ದುಷ್ಕರ್ಮಿಗಳು: ಕೊಂದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ ಪಾಪಿಗಳು

spot_img
- Advertisement -
- Advertisement -

ಕಾಸರಗೋಡು: ಗಲ್ಫ್ ನಲ್ಲಿದ್ದ ಯುವಕನನ್ನು ಊರಿಗೆ ಕರೆಸಿ, ಬಳಿಕ ಅಪಹರಣ ಮಾಡಿ ಕೊಲೆ ಮಾಡಿ, ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟ ಬೆಚ್ಚಿಬೀಳಿಸುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡು ಕುಂಬಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಗುವಿನ ಅಬುಬಕರ್ ಸಿದ್ದಿಕ್ (32) ಎಂಬ ಯುವಕನನ್ನುಊರಿಗೆ ಕರೆಸಿದ ದುಷ್ಕರ್ಮಿಗಳ ಗ್ಯಾಂಗ್‌ ಯುವಕನನ್ನು ಅಪಹರಿಸಿ ನಂತರ ಹತ್ಯೆ ನಡೆಸಿ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದೆ.

ಕೆಲವು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿದ್ದೀಕ್ ನ ಕುಟುಂಬದ ಇಬ್ಬರನ್ನು ಪೈವಳಿಕೆ ನಿವಾಸಿಗಳು ಎರಡು ದಿವಸದ ಮೊದಲು‌ ಅಪಹರಿಸಿದ್ದರು. ‌ಇವರನ್ನು ಬಂಧನದಲ್ಲಿ ಇರಿಸಿ ಗಲ್ಫ್‌ನಿಂದ ಸಿದ್ದಿಕ್ ನನ್ನು ಊರಿಗೆ ಕರೆದು ನಂತರ ಗಲ್ಪ್ ನಿಂದ ಬಂದ ಸಿದ್ದೀಕ್ ನನ್ನು ಅಪಹರಣ ಮಾಡಿದ್ದಾರೆ. ಬಳಿಕ ಕೊಲೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!