- Advertisement -
- Advertisement -
ಕಾರ್ಕಳ: ವಿದ್ಯುತ್ ತಂತಿ ಏಣಿಗೆ ಸ್ಪರ್ಶಿಸಿ ಯುವಕ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ನಡೆದಿದೆ. ಬಿಹಾರ ಮೂಲದ ಕಾರ್ಮಿಕ ಸೌರವ್ ಕುಮಾರ್ (20) ಮೃತ ಯುವಕ.
ಕೆಲ ವರ್ಷಗಳಿಂದ ಸೌರವ್ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದ ಇವರು ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.ಇವರು ವಾಸಿಸುತ್ತಿದ್ದ ಕಟ್ಟಡದಲ್ಲಿ ಮಂಗಗಳು ಸಾಬೂನು, ಬಟ್ಟೆ ಇತ್ಯಾದಿಗಳನ್ನು ತೆಗೆದುಕೊಂಡು ಬೇರೆಡೆ ಹಾಕುತ್ತಿದ್ದವು.ಇದರಿಂದಾಗಿ ಯುವಕರು ಕಾಣೆಯಾದ ವಸ್ತುಗಳನ್ನು ಹುಡುಕಲು ಟೆರೇಸ್ಗೆ ಹೋಗುವ ಸಲುವಾಗಿ ಏಣಿಯನ್ನು ಎತ್ತಿದಾಗ ವಿದ್ಯುತ್ ತಂತಿ ಏಣಿಗೆ ತಗುಲಿದೆ. ಏಣಿ ಹಿಡಿದಿದ್ದ ಸೌರವ್ಗೆ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -