- Advertisement -
- Advertisement -
ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯ ಜೀರ್ಣೋದ್ದಾರದ ಜೊತೆಗೆ ಬೆಮ್ಮೆರ್, ಕಲ್ಲುರ್ಟಿ ಮತ್ತು ಬೊಣ್ಯ ಕೊರತಿ ದೈವ ಸಾನ್ನಿಧ್ಯಗಳ ಜೀರ್ಣೋದ್ದಾರವೂ ನಡೆಯಲಿದೆ.
ಆ ಪ್ರಯುಕ್ತ ತಾ. 16-07-2023ನೇ, ಆದಿತ್ಯವಾರ(ಸಂಕ್ರಮಣದ ದಿನ) ಬೆಳಿಗ್ಗೆ ಗಂಟೆ 9-00ಕ್ಕೆ ಗುದ್ದಲಿ ಪೂಜೆ ನಡೆಯಲಿರುವುದು. ಬಳಿಕ ಮಾಣಿಗುತ್ತಿನಲ್ಲಿ ಜೀರ್ಣೋದ್ಧಾರದ ಸಲುವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿರುವುದು.
ಗ್ರಾಮಸ್ಥರು, ಭಕ್ತಾಭಿಮಾನಿಗಳು ಈ ಪುಣ್ಯ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರಾದ ಸಚಿನ್ ರೈ, ಮಾಣಿಗುತ್ತು ವಿನಂತಿಸಿದ್ದಾರೆ.
- Advertisement -