Saturday, May 18, 2024
Homeತಾಜಾ ಸುದ್ದಿಕರಂಬಾರು: ಉಚಿತ ಆಯುಷ್ಮನ್ ಕಾರ್ಡ್ ವಿತರಣೆ ಕಾರ್ಯಕ್ರಮ

ಕರಂಬಾರು: ಉಚಿತ ಆಯುಷ್ಮನ್ ಕಾರ್ಡ್ ವಿತರಣೆ ಕಾರ್ಯಕ್ರಮ

spot_img
- Advertisement -
- Advertisement -

ಕರಂಬಾರು: ಭಾರತೀಯ ಜನತಾ ಪಾರ್ಟಿ ಕರಂಬಾರು ಗ್ರಾಮ ಸಮಿತಿಯ ವತಿಯಿಂದ ಉಚಿತ ಆಯುಷ್ಮನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಕರಂಬಾರಿ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಶಿವಾನಂದ ಹೆಗ್ಡೆ ಪರ್ಲಂಡ, ಕಿಶೋರ್ ಹೆಗ್ಡೆ ಯೇರ್ಮೇತೊಡಿ ಇವರು ಉದ್ಘಾಟಿಸಿದರು.

ಸಬೆಯ ಅಧ್ಯಕ್ಷತೆಯನ್ನು ಶಿರ್ಲಾಲು ಸಿ ಏ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ನವೀನ್ ಕೆ ಸಮಾನಿ ಕರಂಬಾರು ಬೀಡು ಇವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ .ಬಿಜೆಪಿ ಅಳದಂಗಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲ ಬೈಲು ಇವರು ಅಯುಷ್ಮನ್ ವಿಮೆಯ ಉಪಯೋಗ ಮತ್ತು ಮಹತ್ವ ಕುರಿತು ಮಾತನಾಡಿದರು.

ಹಾಗೂ ನರೇಂದ್ರ ಮೋದಿ ಯವರ 70 ನೇ ಹುಟ್ಟು ಹಬ್ಬದಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಕರಂಬಾರು ಗ್ರಾಮದ ಬಿಜಿಪಿ ಕಾರ್ಯಕರ್ತರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದರು ಸಭೆಯಲ್ಲಿ ಬೂ ಅಭಿವೃದ್ದಿ ಬ್ಯಾಂಕ್ ಬೆಳ್ತಂಗಡಿ ಇದರ ನಿರ್ದೇಶಕರಾದ ಶ್ರೀಮತಿ ಶೀಲಾವತಿ ಹಾಗೂ ಶಿರ್ಲಾಲು CA ಬ್ಯಾಂಕಿನ ನಿರ್ದೇಶಕರಾದ ರಾಮ ಬಂಗೇರ ಮತ್ತು ಶ್ರೀಮತಿ ಸುಶೀಲಾ ಹಾಗೂ ಕರಂಬಾರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ತೊಡಬಾಕಿಲು ಹಾಗೂ ಕರಂಬಾರು ಬೊಟ್ಟೆಲ್ಮಾರು ಕೊಡಮಣಿತ್ತಾಯ ದೈವದ ಜಾತ್ರಾ ಸಮಿತಿಯ ಅಧ್ಯಕ್ಷರಾದ ರಾಜಿತ್ ರೈ ಪಂಬೇದಬೇಟ್ಟು ಹಾಗೂ ಶಿರ್ಲಾಲು ಗ್ರಾಮ ಪಂಚಾಯತ್ ಇದರ ಮಾಜಿ ಉಪಾಧ್ಯಕ್ಷರು ಆದಂತಹ ಶ್ರೀ ಸಂಜೀವ ದೇವಾಡಿಗ ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಒಟ್ಟು 380 ಆಯುಷ್ಮಣ್ ಕಾರ್ಡ್ ಮಾಡಿ ಕೊಡಲಾಯಿತು. ಕುಮಾರಿ ಸುಪ್ರಿತ ಹಾಗೂ ಕುಮಾರಿ ಸಿಂಚನ ರವರ ಪ್ರಾರ್ಥನೆಯ ಬಳಿಕ ಸಾಧಾಶಿವ ಶಾಂತಿನಗರ ಇವರು ಸ್ವಾಗತಿಸಿದರು ಹಾಗೂ ಸಂಜೀವ ಕೆ ಬಂಥಡ್ಕ ವಂದಿಸಿ ರಾಜೀತ್ ರೈ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ದ ಯಶಸ್ವಿ ಗೆ ರಘುನಾಥ ಶೆಟ್ಟಿ ಮೂಕ್ರೆ ಹಾಗೂ ಪ್ರಶಾಂತ್ ಶಾಂತಿನಗರ, ಪ್ರತಾಪ್ ಕಲ್ಲಜೆ, ಪದ್ಮನಾಭ ಶೆಟ್ಟಿ ದೆಗಡೇಕೊಡಿ, ರಮೇಶ್ ದೇವಾಡಿಗ ಕುಂಟಾಲ ಕಜೆ, ಶಧಾಶಿವ ಶಾಂತಿನಗರ, ಕುಮಾರಿ ಅಮಿತ ಕುಂಟಾಲ ಕಜೇ, ಕುಮಾರಿ ಶ್ವೇತಾ ಕೊಪ್ಪಲ, ಅಬ್ದುಲ್ ಕಾಧರ್ , ರಕ್ಷಿತ್ ಕಟ್ಟಿಲ್ಕೊಡಿ, ಪ್ರಜ್ವಲ್ ಶೆಟ್ಟಿ ಹಳೇಬೀಡು ಹಾಗೂ ಭವಿಷ್ ಸಾಮನಿ ಕಾರಂಬಾರು ಬೀಡು ಇವರು ಶ್ರಮಿಸಿದ್ದಾರೆ.

- Advertisement -
spot_img

Latest News

error: Content is protected !!