- Advertisement -
- Advertisement -
ಬೆಂಗಳೂರು: 2021ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಡಾ. ನಾ. ಮೊಗಸಾಲೆ ಸೇರಿ ಒಟ್ಟು ಐವರಿಗೆ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿ 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
ಇದಲ್ಲದೇ 2021ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ಗಿರೀಶ್ ರಾವ್ ಹತ್ವಾರ್ ಆಯ್ಕೆಯಾಗಿದ್ದಾರೆ.
ಇನ್ನು 2020ನೇ ಸಾಲಿನ ಅಕಾಡೆಮಿಯ ದತ್ತಿ ಬಹುಮಾನಕ್ಕೆ ಪುರುಷೋತ್ತಮ ಬಿಳಿಮಲೆ ಅವರ ಕಾಗೆ ಮುಟ್ಟಿದ ನೀರು ಕೃತಿಗೆ ಜೀವನ ಚರಿತ್ರೆ ಪ್ರಕಾರದಲ್ಲಿ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ಲಭಿಸಿದೆ.
- Advertisement -