ಕಡಬ: ಇಲ್ಲಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಎನ್ಕಜೆಯಲ್ಲಿನ ಇಮ್ಯಾನ್ಯುವೆಲ್ ಎ.ಜಿ. ಚರ್ಚ್ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ್ದಲ್ಲದೇ, ಚರ್ಚ್ ನ ಒಳಗೆ ಹನಮುಂತ ಫೋಟೋ ಇಟ್ಟು, ಚರ್ಚ್ ಗೆ ಸಂಬಂಧಪಟ್ಟ ಕೆಲವು ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾರೆಂದು ಚರ್ಚ್ ನ ಫಾದರ್ ಜೋಸ್ ವರ್ಗೀಸ್ ಬಿನ್ ವರ್ಗೀಸ್, ಇಮ್ಯಾನ್ಯುವೆಲ್ ಅಸೆಂಬ್ಲಿ ಆಫ್ ಗಾಡ್ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಯಾರೋ ಚರ್ಚ್ ನ ಬಾಗಿಲು ನ್ನು ಒಡೆದು ಅಕ್ರಮವಾಗಿ ಚರ್ಚ್ ಒಳಗೆ ಪ್ರವೇಶಿಸಿ, ಹನುಮಂತನ ಫೋಟೋವಿರಿಸಿ, ಕಪಾಟಿನಲ್ಲಿರಿಸಿದ್ದ ಚರ್ಚೆಗೆ ಸಂಬಂಧಪಟ್ಟ ದಾಖಲೆಗಳನ್ನು ನಾಶಪಡಿಸಿದ್ದಾರೆ. ಅಲ್ಲದೇ ಚರ್ಚ್ ನ ಬಲ್ಬ್ ಗಳು, ಸುಮಾರ 14 ಸಾವಿರ ರೂಪಾಯಿ ಮೌಲ್ಯದ ಪಂಪ್ ಸೆಟ್ ನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಸರ್ವಿಸ್ ವಯರ್ ಕಟ್ ಮಾಡಿ, ಮೀಟರ್ ಬಾಕ್ಸ್ ನ್ನು ತೆಗೆದುಕೊಂಡು ಹೋಗಿದ್ದಾರೆ.ಈ ಬಗ್ಗೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.