- Advertisement -
- Advertisement -
ಉಡುಪಿ: ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರು ಮತ್ತು ಗರುಡ ದೇವರ ದರ್ಶನ ಪಡೆದ ಜೂನಿಯರ್ ಎನ್ ಟಿ ಆರ್ ವಿಶೇಷ ಪೂಜೆ ಸಲ್ಲಿಸಿದರು.
ಶ್ರಾವಣ ಮಾಸದ ಶನಿವಾರದಂದು ಕುಟುಂಬ ಸಮೇತ ಉಡುಪಿಗೆ ಭೇಟಿ ನೀಡಿದ ಜೂನಿಯರ್ ಎನ್ ಟಿಆರ್ ದೇವರ ದರ್ಶನ ಪಡೆದಿದ್ದಾರೆ.
ಜೂನಿಯರ್ ಎನ್ ಟಿಆರ್ ಜೊತೆ ಸ್ಯಾಂಡಲ್ ವುಡ್ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ಚಲನಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಭಾಗಿಯಾಗಿದ್ದರು.
- Advertisement -