- Advertisement -
- Advertisement -
ಬೈಂದೂರು: ಕಾಲ್ತೋಡು ಗ್ರಾಮದಲ್ಲಿ ಬಾಲಕಿ ಸನ್ನಿಧಿ ನೀರು ಪಾಲಾಗಿದ್ದು, ಇಂತಹ ಘಟನೆ ನಡೆಯಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಕರಾವಳಿ ಮತ್ತು ಮಲೆನಾಡು ಗ್ರಾಮಗಳ ಗ್ರಾಮೀಣ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ತೆರಳಲು ಅನುಕೂಲವಾಗಲು ಜಾರಿಗೊಳಿಸಿದ ಶಾಲಾ ಸಂಪರ್ಕ ಸೇತು ಯೋಜನೆಗೆ ಬಿಜೆಪಿ ಸರಕಾರ ತಿಲಾಂಜಲಿ ಇಟ್ಟಿರುವುದೇ ಮುಖ್ಯ ಕಾರಣ. ಒಂದು ವೇಳೆ ಕುಮಾರಸ್ವಾಮಿಯವರ ಈ ಯೋಜನೆ ಪೂರ್ಣಗೊಂಡಿದ್ದರೆ ಈ ಘಟನೆ ಖಂಡಿತವಾಗಿಯೂ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
- Advertisement -