- Advertisement -
- Advertisement -
ಕಟೀಲು: ಕಟೀಲಿನ ಮಲ್ಲಿಗೆಯಂಗಡಿ ಎಂಬಲ್ಲಿ ನಾಗಬನದಲ್ಲಿದ್ದ 6 ಕಲ್ಲುಗಳನ್ನು ಬೇರೆಡೆ ಎಸೆದು ಅಪವಿತ್ರಗೊಳಿಸಿದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಬೇಕು ಎಂದು ದಕ್ಷಿಣಕನ್ನಡ ಜಿಲ್ಲೆ ರಾಮ್ ಸೇನಾ ಆಗ್ರಹಿಸಿದೆ.
ಪುರಾತನ ಕಾಲದಿಂದಲೂ ತುಳುನಾಡಿನ ಆರಾಧ್ಯ ದೇವರುಗಳಲ್ಲಿ ಒಂದಾದ ನಾಗದೇವರಿಗೆ ಅವಮಾನ ಮಾಡಿ ಅನಾಗರಿಕತೆ ಮೆರೆದ ಈ ಕಿಡಿಗೇಡಿಗಳ ಕೃತ್ಯವನ್ನು ರಾಮ್ ಸೇನಾ ತೀವ್ರವಾಗಿ ಖಂಡಿಸುತ್ತದೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲೆ ರಾಮ್ ಸೇನಾ ಅಧ್ಯಕ್ಷರಾದ ಸುಶಿತ್ ಸಾಲ್ಯಾನ್ ತಿಳಿಸಿದ್ದಾರೆ.
- Advertisement -