- Advertisement -
- Advertisement -
ಬೆಂಗಳೂರು: ನಗರದಲ್ಲಿ ಬಯಲಾದ ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ವುಡ್ ನಂಟಿದೆ ಎಂದು ಹೇಳಿದ್ದ ನಿರ್ದೇಶಕ ಇಂದ್ರಜೀತ್ ಲಂಕೇಶ್, ಚಿರಂಜೀವಿ ಸರ್ಜಾರ ಹೆಸ್ರನ್ನ ತಳಕು ಹಾಕಿದ್ರು. ಸದ್ಯ “ಚಿರು ಕುರಿತು ನೀಡಿದ ನನ್ನ ಹೇಳಿಕೆಯನ್ನ ಹಿಂದೆ ತೆಗೆದುಕೊಳ್ಳುತ್ತಿದ್ದೇನೆ” ಎಂದು ಇಂದ್ರಜೀತ್ ಲಂಕೇಶ್ ಸ್ಪಷ್ಟ ಪಡಿಸಿದ್ದಾರೆ.
“ಸತ್ತವರ ಬಗ್ಗೆ ಮಾತನಾಡುವುದು ಸರಿಯಲ್ಲ. ನನ್ನ ಹೇಳಿಕೆಯಿಂದ ಕುಟುಂಬಕ್ಕೆ ನೋವಾಗಿದೆ. ಇದ್ರಲ್ಲಿ ನನ್ನದೇನು ದುರುದ್ದೇಶ ಇರ್ಲಿಲ್ಲ, ಆದ್ರೆ, ಒಳ್ಳೆ ಭವಿಷ್ಯವಿದ್ದ ನಟ ಸತ್ತನಲ್ಲ ಎನ್ನುವ ನೋವಿದೆ. ಹಾಗಾಗಿ ಮರಣೋತ್ತರ ಯಾಕೆ ಮಾಡಿಸಲಿಲ್ಲ ಎಂದಿದ್ದಾರೆ. ಸದ್ಯ ನನ್ನ ಹೇಳಿಕೆಯನ್ನ ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ್ ಹೇಳಿದ್ದಾರೆ.
- Advertisement -