- Advertisement -
- Advertisement -
ಉಡುಪಿ: ಇಲ್ಲಿನ ಜಾಮಿಯಾ ಮಸೀದಿ ವಠಾರದಲ್ಲಿ 75ನೆ ಸ್ವಾತಂತ್ರೋತ್ಸವ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಾಮಿಯಾ ಮಸೀದಿಯ ಖತೀಬ್ ಮೌಲಾನ ರಶೀದ್ ಅಹಮದ್ ನದ್ವಿ ಧ್ವಜಾರೋಹಣ ನೆರವೇರಿಸಿ ಸ್ವಾಂತ್ಯೋತ್ಸವದ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಮುಹಮ್ಮದ್ ಅರ್ಷದ್ ವಹಿಸಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮ ಸ್ವಾಗತಿಸಿದರು. ಸಮಿತಿ ಸದಸ್ಯರಾದ ಖಲೀಲ್ ಅಹಮದ್, ಮುನೀರ್ ಮಹಮ್ಮದ್, ಇಫಿಕಾರ್, ತಬ್ರೆಝ್, ಜಮಾತ್ ಸದಸ್ಯರು, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಖಜಾಂಚಿ ರಿಯಾಝ್ ಅಹಮದ್ ವಂದಿಸಿದರು.
- Advertisement -