ಬೆಳ್ತಂಗಡಿ : ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದದ್ದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಒಬ್ಬನನ್ನು ಬಂಧಿಸಿ, ವಾಹನದಲ್ಲಿದ್ದ ಎರಡು ದನ , ಒಂದು ಕರುವನ್ನು ರಕ್ಷಣೆ ಮಾಡಿರುವ ಘಟನೆ ಬೆಳ್ತಂಗಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಕಡೆಯಿಂದ ಪಿಲಿಗೂಡು ಕಡೆಗೆ ಅಕ್ರಮವಾಗಿ ಎರಡು ದನ ಮತ್ತು ಒಂದು ಕರುವನ್ನು ಆಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಅದರಂತೆ ಮಂಗಳವಾರ ರಾತ್ರಿ ಸುಮಾರು 11:30 ರ ವೇಳೆಗೆ ಬೆಳ್ತಂಗಡಿ ಕೆ.ಇ.ಬಿ ರಸ್ತೆಯಾಗಿ ಮುಗುಳಿ ಬಳಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡಿರುವು ದೃಢಪಟ್ಟಿದೆ ಈ ವೇಳೆ ವಾಹನದಲ್ಲಿ ಇಬ್ಬರು ಆರೋಪಿಗಳು ಇದ್ದು ಓರ್ವ ಆರೋಪಿ ವಾಹನದಿಂದ ಹಾರಿ ಕಾಡಿನ ಮಧ್ಯೆ ಪರಾರಿಯಾಗಿದ್ದು ಮತ್ತೊಬ್ಬ ಆರೋಪಿ ವಾಹನ ಮಾಲೀಕ & ಚಾಲಕನಾಗಿದ್ದ ತೆಕ್ಕಾರಿನ ಶರೀಫ್(47) ಎಂಬತನನ್ನು ಬಂಧಿಸಿದ್ದಾರೆ.
ವಾಹನದಲ್ಲಿ ಒಟ್ಟು ಎರಡು ದನ ಮತ್ತು ಒಂದು ಕರು ಇದ್ದು ಅದನ್ನು ರಕ್ಷಣೆ ಮಾಡಲಾಗಿದ್ದು, ಆಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.