- Advertisement -
- Advertisement -
ಕೊಚ್ಚಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಈಗ ಕೇರಳದಲ್ಲಿದೆ. ನೆಡುಂಬಶ್ಶೇರಿಯ ಕೊಟ್ಟಾಯಿ ಜಂಕ್ಷನ್ನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಕೋರಿ ಕಾಂಗ್ರೆಸ್ ಪಕ್ಷ ಬ್ಯಾನರ್ ಸ್ಥಾಪಿಸಿತ್ತು.
ಈ ಬ್ಯಾನರ್ನಲ್ಲಿ ಸಾವರ್ಕರ್ ಚಿತ್ರವಿದ್ದು, ಫೋಟೊ ವೈರಲ್ ಆದ ಬೆನ್ನಲ್ಲೇ ಈ ಚಿತ್ರವನ್ನು ಬದಲಿಸಲಾಗಿದೆ. ಕೇರಳದ ಶಾಸಕ ಪಿವಿ ಅನ್ವರ್ ಈ ಬ್ಯಾನರ್ ಚಿತ್ರವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಬಂದು ಸಾವರ್ಕರ್ ಅವರ ಚಿತ್ರದ ಮೇಲೆ ಗಾಂಧೀಜಿಯವರ ಚಿತ್ರವನ್ನು ಅಂಟಿಸಿ ಮುಜುಗರ ತಪ್ಪಿಸುವ ಕೆಲಸ ಮಾಡಿದ್ದಾರೆ.
- Advertisement -