- Advertisement -
- Advertisement -
ಬಂಟ್ವಾಳ; ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಪಿಕಪ್ ಸಹಿತ ಓರ್ವನನ್ನು ಬಂಧಿಸಿರುವ ಘಟನೆ ಬಂಟ್ವಾಳದ ಮಾಣಿಯಲ್ಲಿ ನಡೆದಿದೆ.
ಇರಾಮೂಲೆ ನಿವಾಸಿ ಮಹಮ್ಮದ್ ಬಂಧಿತ ಅರೋಪಿ. ಹಮೀದ್, ಮತ್ತು ಪವನ್ ರಾಜ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.ಪಿಕಪ್ ವಾಹನ ಹಾಗೂ ದನಗಳನ್ನು ವಶಕ್ಕೆ ಪಡೆದಿದ್ದಾರೆ. ಹಮೀದ್ ಮತ್ತು ಪವನ್ ರಾಜ ನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ .
ದನಗಳನ್ನು ಕೊಂದು ಮಾಂಸವನ್ನು ಕೇರಳಕ್ಕೆ ಸಾಗಾಟ ಮಾಡುವ ಉದ್ದೇಶದಿಂದ ಪವನ್ ರಾಜ ಎಂಬವರ ಮನೆಗೆ ಜಾನುವಾರುಗಳನ್ನು ಪಿಕಪ್ ವಾಹನಕ್ಕೆ ತುಂಬಿಸಿ ಕೊಂಡೊಯ್ಯಲಾಗಿತ್ತು ಎನ್ನಲಾಗಿದೆ.
- Advertisement -