- Advertisement -
- Advertisement -
ಬೆಂಗಳೂರು: ಬ್ರಾಹ್ಮಣರಿಗೆ ನಾನು ಅವಮಾನ ಮಾಡಿಲ್ಲ. ಹಾಗಾಗಿ ನಾನು ಕ್ಷಮೆ ಕೇಳಲ್ಲ ಅಂತ ಮಾಜಿ ಸಿಎಂ ಹೆಚ್..ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪ್ರಹ್ಲಾದ್ ಜೋಶಿ ಬಗ್ಗೆ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ, ಇವರು ನಮ್ಮ ಸಂಸ್ಕೃತಿಯ ಬ್ರಾಹ್ಮಣರಲ್ಲ. ಸಮಾಜ ಒಡೆಯುವ ಬ್ರಾಹ್ಮಣರು. ಶೃಂಗೇರಿ ಮಠ ಒಡೆದವರು ಅಂತ ಟೀಕೆ ಮಾಡಿದ್ರು.
ಈ ಹೇಳಿಕೆ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಆದ್ರೆ ಈ ಕುಮಾರಸ್ವಾಮಿ ಕ್ಷಮೆಯಾಚಿಸಲು ನಿರಾಕರಿಸಿದ್ದು, ನಾನು ಬ್ರಾಹ್ಮಣರನ್ನು ಅವಮಾನಿಸಿಲ್ಲ ಎಂದು ಹೇಳಿದ್ದಾರೆ.
- Advertisement -