Saturday, May 4, 2024
Homeಇತರನಮಾಜ್ ಮಾಡಿದರೆ ಉತ್ತಮ ವರ ಸಿಗುವ ಆಮಿಷ ತೋರಿಸಿ ಮೌಲ್ವಿಯಿಂದ ಯುವತಿಯ ಅತ್ಯಾಚಾರ

ನಮಾಜ್ ಮಾಡಿದರೆ ಉತ್ತಮ ವರ ಸಿಗುವ ಆಮಿಷ ತೋರಿಸಿ ಮೌಲ್ವಿಯಿಂದ ಯುವತಿಯ ಅತ್ಯಾಚಾರ

spot_img
- Advertisement -
- Advertisement -

ಮೈಸೂರು: ಮಸೀದಿಯಲ್ಲಿ ದೇವರಿಗೆ ವಿಶೇಷ ನಮಾಜ್‌ ಸಲ್ಲಿಸಿದರೆ ವಿವಾಹವಾಗುತ್ತದೆ ಎಂದು ಯುವತಿಯನ್ನು ನಂಬಿಸಿ, ಮೌಲ್ವಿಯೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಿಲ್ಕುಂದ ಗ್ರಾಮದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಹುಣಸೂರಿನ ಲಾಲ್​​​​ಬನ್ ಬೀದಿಯ ವಾಸಿ, ಹೈರಿಗೆ ಗ್ರಾಮದ ಮಸೀದಿಯ ಧರ್ಮಗುರು ಜಬೀವುಲ್ಲಾ ಎಂದು ಗುರುತಿಸಲಾಗಿದೆ.

ಪರಿಚಿತಳಾಗಿದ್ದ ಈ ಯುವತಿಗೆ ಉತ್ತಮ ವರ ಸಿಗಬೇಕಾದರೆ ವಿಶೇಷ ನಮಾಜ್‌ ಮಾಡುತ್ತೇನೆ ಎಂದು ನಂಬಿಸಿದ್ದ. ಈ ಮೂಲಕ ಯುವತಿಯ ವಿಶ್ವಾಸ ಗಳಿಸಿಕೊಂಡ ಈತ ನಂತರ ಈ ನೆಪದಲ್ಲಿ ಯುವತಿಯ ಮೇಲೆಯೇ ಅತ್ಯಾಚಾರ ಎಸಗಿದ್ದ.

ಈತನ ಪೈಶಾಚಿಕ ಕೃತ್ಯದ ಕುರಿತು ಯುವತಿಯ ತಂದೆಯು ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮೌಲ್ವಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

- Advertisement -
spot_img

Latest News

error: Content is protected !!