- Advertisement -
- Advertisement -
ಉಡುಪಿ: ಮನೆಗೆ ನುಗ್ಗಿದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬಾರ್ಕೂರು ಮಸ್ಕಿಬೈಲು ಎಂಬಲ್ಲಿ ನಡೆದಿದೆ.
ಮಸ್ಕಿಬೈಲು ನಿವಾಸಿ ಮಧುಶ್ರೀ ಎಂಬವರು ಮಕ್ಕಳಿಗೆ ಶಾಲೆಗೆ ರಜೆ ಇದ್ದ ಕಾರಣ ಎ.12ರಂದು ಮನೆಗೆ ಬೀಗ ಹಾಕಿ ಗೋವಾಕ್ಕೆ ತೆರಳಿದ್ದು, ಎ.21ರಂದು ರಾತ್ರಿ ಮನೆಯ ಮುಖ್ಯದ್ವಾರದ ಲಾಕರ್ ಸ್ಕ್ರೂ ಕಳಚಿ ಒಳಗೆ ಪ್ರವೇಶಿಸಿದ ಕಳ್ಳರು ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -