ಮಧ್ಯಪ್ರದೇಶ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ಮತ್ತೊಂದು ಚೀತಾ ಸಾವನ್ನಪ್ಪಿದೆ. ಭಾನುವಾರ ಬೆಳಿಗ್ಗೆ ಅಸ್ವಸ್ಥಗೊಂಡು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡನೇ ಚೀಸಾವನ್ನಪ್ಪಿದೆ. ಫೆಬ್ರವರಿಯಲ್ಲಿ ದೇಶಕ್ಕೆ ಬಂದ 12 ಚಿರತೆಗಳಲ್ಲಿ ಆರು ವರ್ಷದ ಉದಯ್ ಕೂಡ ಒಂದು.ದಿನನಿತ್ಯದ ತಪಾಸಣೆಯಲ್ಲಿ ಉದಯ್ ಆಲಸ್ಯ ಮತ್ತು ಕುಂಟುತ್ತಾ ಇದ್ದ ಎಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಿಗ್ಗೆ 11 ಗಂಟೆಗೆ ಮೊದಲ ಸುತ್ತಿನ ಚಿಕಿತ್ಸೆ ನೀಡಿ ನಂತರ ಉದಯ್ ಅನ್ನು ದೊಡ್ಡ ಆವರಣದಿಂದ ಹೊರತೆಗೆಯಲಾಯಿತು. ಕೆಲವು ಗಂಟೆಗಳ ನಂತರ ಸಂಜೆ 4 ಗಂಟೆಗೆ ಉದಯ್ ಕೊನೆಯುಸಿರೆಳೆಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ದೇಶದಲ್ಲಿ ಚಿರತೆಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯಲ್ಲಿ ಭಾರತಕ್ಕೆ ತರಲಾದ 20 ಚೀತಾಗಳಲ್ಲಿ 18 ಚೀತಾಗಳು ಈಗ ಉಳಿದಿವೆ.