- Advertisement -
- Advertisement -
ಬೆಳ್ತಂಗಡಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಳುವರ ಆರಾಧ್ಯ ದೈವ ಗುಳಿಗನಿಗೆ ಅವಮಾನ ಮಾಡಿದ್ದಾರೆ. ಗುಳಿಗ ದೈವವನ್ನು ಜಾಪಾಳ್ ಮಾತ್ರೆಗೆ’ ಹೋಲಿಸಿ ಮಾತನಾಡಿದ್ದು ಅವರು ಗುಳಿಗ ದೈವದ ಸನ್ನಿಧಿಗೆ ಬಂದು ಕ್ಷಮೆಯಾಚಿಸಬೇಕು ಎಂದು ಬೆಳ್ತಂಗಡಿ ನಲಿಕೆಯವರ ಸಂಘ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್ ಪ್ರಭಾಕರ್ ಶಾಂತಿಕೋಡಿ, ಸಿ.ಟಿ.ರವಿಗೆ ಕೂಡಾ ತುಳುನಾಡಿನ ದೈವದ ಹೆಸರೇಳುವ ನೈತಿಕತೆ ಇಲ್ಲ. ಅವ್ರು ತುಳುನಾಡಿನ ಎಲ್ಲಾ ದೈವಗಳು ಬಿಜೆಪಿ ಪರ ಎಂದಿದ್ದಾರೆ. ಸಿ.ಟಿ.ರವಿ ಕೂಡಾ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ರು.
- Advertisement -