- Advertisement -
- Advertisement -
ಉಡುಪಿ ಜಿಲ್ಲೆಯ ಮಲ್ಪೆಯ ಬೈಲಕೆರೆಯಲ್ಲಿ ಹಿಜಾಬ್ ಗೆ ಸಂಬಂಧಿದಂತೆ ಗೋಡೆಬರಹ ಪತ್ತೆಯಾಗಿದೆ. ಇಲ್ಲಿನ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಕಿಡಿಗೇಡಿಗಳು ಹಿಜಾಬ್ ಪರ ಬರಹವನ್ನು ಬರೆದಿದ್ದಾರೆ.
ಸ್ಥಳಕ್ಕೆ ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ . ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಶರಣಬಸವ ಪಾಟೀಲ್ ಅವರು ಹಿಂದೂ ಕಾರ್ಯಕರ್ತರನ್ನು ಸ್ಥಳದಿಂದ ತೆರಳುವಂತೆ ಮನವೊಲಿಸಿದ್ದು ಮಲ್ಪೆ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -