Thursday, June 4, 2026
Homeಕರಾವಳಿರೈಲ್ವೇ ಬಜೆಟ್ ನಲ್ಲಿ ದಕ್ಷಿಣಭಾರತದ ರಾಜ್ಯಗಳಿಗೆ ಅನ್ಯಾಯ : ಸಂಸತ್ತಿನಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ ಆಕ್ಷೇಪ

ರೈಲ್ವೇ ಬಜೆಟ್ ನಲ್ಲಿ ದಕ್ಷಿಣಭಾರತದ ರಾಜ್ಯಗಳಿಗೆ ಅನ್ಯಾಯ : ಸಂಸತ್ತಿನಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ ಆಕ್ಷೇಪ

- Advertisement -
- Advertisement -

ನವದೆಹಲಿ: ರೈಲ್ವೇ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ದಕ್ಷಿಣಭಾರತ ಹಾಗೂ ಉತ್ತರಭಾರತದ ರಾಜ್ಯಗಳ ನಡುವೆ ತಾರತಮ್ಯ ಮಾಡಿದೆ ಎಂದು ಡಿಎಂಕೆ ಸಂಸದೆ ಕನ್ನಿಮೋಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ರೈಲ್ವೇ ಹೊಸ ರೈಲ್ವೇ ಮಾರ್ಗಗಳನ್ನು ನಿರ್ಮಿಸಲು ದಕ್ಷಿಣ ರೈಲ್ವೇಗೆ ಕೇವಲ 59 ಕೋಟಿ ಮೀಸಲಿಸಿದ್ದಾರೆ. ಆದರೆ ಉತ್ತರ ರೈಲ್ವೇಗೆ 13 ಸಾವಿರ ಕೋಟಿ ಕೊಟ್ಟಿದ್ದಾರೆ. ಈ ಮೂಲಕ ನೀವು ತಾರತಮ್ಯ ಮಾಡಿದ್ದೀರಾ ಎಂದು ರೈಲ್ವೇ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೇ ನಿಮ್ಮ ಭಾಷಣದಲ್ಲಿ ದಕ್ಷಿಣ ಭಾರತವನ್ನು ಯಾಕೆ ಪ್ರಸ್ತಾಪ ಮಾಡಲ್ಲ ಎಂದು ಪ್ರಶ್ನಿಸಿದ್ದಾರೆ. ರೈಲ್ವೇ ನೇಮಕಾತಿಯಲ್ಲೂ ದಕ್ಷಿಣ ಭಾರತದವರಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

- Advertisement -

Latest News

error: Content is protected !!