- Advertisement -
- Advertisement -
ಧಾರವಾಡ: ಜೈಲಿನಲ್ಲಿ ಮಜ್ಜಿಗೆ ರುಚಿ ಹೆಚ್ಚಿಸುವುದು ಹೇಗೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ತಿಳಿಸಿಕೊಟ್ಟಿದ್ದಾರೆ
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಧಾರವಾಡ ಕೇಂದ್ರ ಕಾರಾಗೃಹದ ಪಾಕಶಾಲೆಯಲ್ಲಿ ಅಡುಗೆ ಸಲಹೆ ನೀಡಿದ್ದಾರೆ. ಜೈಲಿಗೆ ಪರಿಶೀಲನೆಗಾಗಿ ಭೇಟಿ ನೀಡಿದ್ದ ವೇಳೆ ಕೈದಿಗಳ ಊಟದ ವ್ಯವಸ್ಥೆಯ ಕುರಿತಂತೆ ನ್ಯಾಯಮೂರ್ತಿಗಳು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಜ್ಜಿಗೆ ರುಚಿ ಹೆಚ್ಚಿಸುವ ವಿಧಾನವನ್ನು ತಿಳಿಸಿ ಕೊಟ್ಟ ನ್ಯಾಯಮೂರ್ತಿಗಳು ಕೊತ್ತಂಬರಿ, ಜೀರಿಗೆ ಮಿಶ್ರಣ ಜೊತೆಗೆ ಪುದೀನಾ ಮೂರನ್ನೂ ಪುಡಿ ಮಾಡಿ ಹಾಕಿ ಅದು ಆರೋಗ್ಯಕ್ಕೂ ಒಳ್ಳೆಯದು ಅಂತಾ ಸಲಹೆ ನೀಡಿದ್ದಾರೆ.
- Advertisement -