- Advertisement -
- Advertisement -
ಖಜಕಿಸ್ತಾನ:ಇಲ್ಲಿ ನಿನ್ನೆ ರಾತ್ರಿ ಜಮ್ಮು-ಕಾಶ್ಮೀರದ ಶ್ರೀನಗರದಿಂದ 450 ಕಿಮೀ ದೂರದಲ್ಲಿ 74 ಕಿಲೋಮೀಟರ್ ಆಳದೊಳಗೆ ಖಜಕಿಸ್ತಾನದಲ್ಲಿ ಭೂಕಂಪನ ಸಂಭವಿಸಿದೆ.ಭಾರತೀಯ ಕಾಲಮಾನ 10-31 ರ ಸುಮಾರಿಗೆ ಭಾರೀ ಭೂಕಂಪ ಸಂಭವಿಸಿರುವ ಕುರಿತು ವರದಿಯಾಗಿದೆ.ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೂಕಂಪನದ ಕುರಿತು ಟ್ವೀಟ್ ಮಾಡಿದ್ದಾರೆ.
ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ. ಭೂಕಂಪದ ಪರಿಣಾಮ
ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಈವರೆಗೆ ಯಾವುದೇ ಹಾನಿ ಸಂಭವಿಸಿರುವ ಕುರಿತು ತಿಳಿದುಬಂದಿಲ್ಲ.
- Advertisement -