Tuesday, April 30, 2024
Homeತಾಜಾ ಸುದ್ದಿನಿಶ್ಚಿತಾರ್ಥ ನಂತರ ಗೋವಾಕ್ಕೆ ಕರೆದೊಯ್ದ ಸುತ್ತಾಟ: ಈಗ ಯುವತಿಯೊಂದಿಗೆ ಮದುವೆ ಬೇಡವೆಂದ ಯುವಕ..!

ನಿಶ್ಚಿತಾರ್ಥ ನಂತರ ಗೋವಾಕ್ಕೆ ಕರೆದೊಯ್ದ ಸುತ್ತಾಟ: ಈಗ ಯುವತಿಯೊಂದಿಗೆ ಮದುವೆ ಬೇಡವೆಂದ ಯುವಕ..!

spot_img
- Advertisement -
- Advertisement -

ಹಾಸನ: ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ತನ್ನ ಭಾವಿ ಪತ್ನಿಯ ಜೊತೆ ಗೋವಾ ಪ್ರವಾಸ ಎಂಜಾಯ್‌ ಮಾಡಿದ ಭಾವಿ ಪತಿ ಮದುವೆಗೆ ಇನ್ನು ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ ಮದುವೆ ನಿರಾಕರಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

ಹಾಸನದ ಬೇಲೂರು ಗ್ರಾಮವೊಂದರ ನಿವಾಸಿ ಕಾವ್ಯಾಗು ಮತ್ತು ಪ್ರಾಫಿಟ್ ಸಂಸ್ಥೆ ಮಾಲೀಕ ಎಂದು ಹೇಳಿಕೊಂಡಿರುವ ಚಿಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ ನಿಶ್ಚಿತ್​ ಸಿ.ಎಸ್​. ಪ್ರೇಮಿಗಳ ದಿನಾಚರಣೆ (ಫೆ.14)ಯಂದು ನಿಶ್ಚಿತಾರ್ಥ ನೇರವೇರಿದೆ. ಇದೇ ಮೇ 09ಕ್ಕೆ ಮದುವೆ ದಿನಾಂಕ ನಿಗದಿಯಾಗಿದ್ದು, ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದೆ.

ಅದಕ್ಕೂ ಮೊದಲು ಎಂಗೇಜ್ಮೆಂಟ್ ಮಾಡಿಕೊಡುವಂತೆ ಯುವಕನ ಪೋಷಕರು ಕೇಳಿದ್ದಾರೆ. ಅದಕ್ಕೆ ಒಪ್ಪಿದ ಯುವತಿಯ ಪೋಷಕರಿಗೆ, ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಮಾಡಬೇಕು. ಹೋಳಿಗೆ ಊಟ, ವೀಡಿಯೋ ಗ್ರಾಫಿ ಕೂಡ ಇರಬೇಕು ಎಂಬ ಕಂಡೀಷನ್ ಹಾಕಿದ್ದಾರೆ. ವರ ನಿಶ್ಚಿತ್ ಹೇಳಿದಂತೆ ಕಲ್ಯಾಣ ಮಂಟಪದಲ್ಲೇ ಇತ್ತೀಚೆಗೆ ಎಂಗೇಜ್ಮೆಂಟ್ ಕೂಡ ಅದ್ದೂರಿಯಾಗಿ ಕಾವ್ಯ ಪೋಷಕರು ಮಾಡಿಕೊಟ್ಟಿದ್ದಾರೆ. ಇದಾದ ಬಳಿಕ ತನ್ನ ಭಾವಿ ಪತ್ನಿ ಕಾವ್ಯನನ್ನು ಗೋವಾಗೆ ಕರೆದುಕೊಂಡು ಟ್ರಿಪ್ ಹೋಗೋದಾಗಿ ನಿಶ್ಚಿತ್ ಕೇಳಿದ್ದಕ್ಕೇ, ಯುವತಿಯ ಪೋಷಕರು ಹೇಗೂ ಎಂಗೇಜ್ಮೆಂಟ್ ಆಗಿದೆ. ಮದುವೆ ಕೂಡ ಆಗಲಿದ್ದಾರೆ ಹೋಗಲಿ ಬಿಡು ಅಂತಲೂ ಕಳುಹಿಸಿ ಕೊಟ್ಟಿದ್ದಾರೆ.

ಆದ್ರೇ.. ಗೋವಾಗೆ ಕಾವ್ಯ ಕರೆದೊಯ್ದಂತ ನಿಶ್ಚಿತ್, ಅಲ್ಲಿ ತನಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಆದ್ರೇ.. ಕಾವ್ಯ ಮಾತ್ರ.. ನೋ.. ನೋ.. ನೋ.. ಮದುವೆಗೆ ಮುಂಚೆ.. ನೀ ಹೇಳಿದಂತೆ ಸಹಕರಿಸೋದಕ್ಕೆ ಆಗೋದಿಲ್ಲ.. ನಾ ಒಪ್ಪೋದೂ ಇಲ್ಲ ಎಂದಿದ್ದಕ್ಕೇ.. ಆ ವರ… ಗೋವಾದಿಂದ ಮರಳಿದ ತಕ್ಷಣವೇ, ಕಾವ್ಯ ಸರಿ ಇಲ್ಲ.. ನನಗೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೇ.. ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ.

ಪ್ರಾಫಿಟ್‌ ಎನ್ನುವ ಸಂಸ್ಥೆಯ ಮಾಲೀಕ ತಮ್ಮ ಪುತ್ರಿಗೆ ಮೋಸ ಮಾಡಿದ್ದಾನೆ ಎಂದು ಆಕೆಯ ಪೋಷಕರು ದೂರು ನೀಡಿದ್ದು, ತಮಗೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ. ಇಂಜಿನಿಯರಿಂಗ್‌ ಮುಗಿಸಿದ್ದ ಹುಡುಗಿಯು ಹುಡುಗನ ಮಾತು ನಂಬಿ ಮದುವೆಯಾದ ಮೇಲೆ ಕೆಲಸ ಮಾಡುವುದು ಬೇಡ ಎಂದು ನಿರ್ಧಿರಿಸಿ ಕೆಲಸವನ್ನೂ ಬಿಟ್ಟಿದ್ದಳು. ಇದೀಗ ಹುಡುಗ ತನಗೆ ಮದುವೆಯೇ ಬೇಡ ಎಂದು ಕುಳಿತಿರುವುದು ಹುಡುಗಿಯ ಪೋಷಕರಿಗೆ ತಲೆನೋವಾಗಿದೆ.

ನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ನ್ಯಾಯಕ್ಕಾಗಿ ಪೊಲೀಸರಿಗೆ ಮೊರೆ ಹೋಗಿದ್ದಾರೆ. ತಮಗೆ ನ್ಯಾಯ ಕೊಡಿಸುವಂತೆ ಬೇಲೂರು ಪೊಲೀಸ್ ಠಾಣೆಗೆ ಯುವತಿ ಪೋಷಕರಿಂದ ದೂರು ನೀಡಲಾಗಿದೆ.

ನಿಶ್ಚಿತ್​ ನನ್ನೆದುರು ಬಂದು ಮಾತನಾಡುವುದುಕ್ಕೂ ತಯಾರಿಲ್ಲ. ನಾನು ಆತನನ್ನೇ ಮದುವೆಯಾಗುವುದು. ಇದು ನನ್ನ ಮರ್ಯಾದೆ ಪ್ರೆಶ್ನೆ. ಇಲ್ಲವಾದರೆ ನಾನು ಸಾಯುತ್ತೇನೆಂದು ವಧು ಹೇಳಿದ್ದಾಳೆ. ಮೇ 9ಕ್ಕೆ ಆತನ ಜತೆಯೇ ನನ್ನ ಮಗಳ ಮದುವೇ ಮಾಡಿಯೇ ತೀರುತ್ತೇನೆಂದು ವಧುವಿನ ತಂದೆ ಯುವರಾಜ್ ತಿಳಿಸಿದ್ದಾರೆ

- Advertisement -
spot_img

Latest News

error: Content is protected !!