- Advertisement -
- Advertisement -
ಶಿವಮೊಗ್ಗ: 2015ರಲ್ಲಿ ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಭಜರಂಗ ದಳ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಪುತ್ರನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಮೊನ್ನೆ ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷ ಸಹೋದರಿ ಅಶ್ವಿನಿ ವಹಿಸಿಕೊಂಡಿದ್ದಾರೆ.
2015ರಲ್ಲಿ ಗಾಜನೂರು ಸಮೀಪ ಹತ್ಯೆಯಾಗಿದ್ದರು ವಿಶ್ವನಾಥ್ ಶೆಟ್ಟಿ. ಸದ್ಯ ವಿಶ್ವನಾಥ್ ಶೆಟ್ಟಿ ಪುತ್ರ ಯಶಸ್ ಚಿಕ್ಕಮಗಳೂರಿನ ಕೊಪ್ಪದ ತನ್ನ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಾನೆ. ಯಶಸ್ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇಂದು ಕೊಪ್ಪದ ಯಶಸ್ ಅಜ್ಜಿ ಮನೆಗೆ ತೆರಳಿದ ಹರ್ಷ ಸಹೋದರಿ ಅಶ್ವಿನಿ ಮುಂದಿನ ಓದಿನ ಜವಾಬ್ದಾರಿ ವಹಿಸಿಕೊಳ್ಳೋದಾಗಿ ತಿಳಿಸಿದ್ದಾರೆ.
- Advertisement -