ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣವನ್ನು ಜಿಲ್ಲಾ ಪೊಲೀಸರು ಐದು ಬೇರೆ ಬೇರೆ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಹಳೆ ದ್ವೇಷದಿಂದಲೇ ಕೊಲೆ ನಡೆದಿರುವುದು ಕಂಡುಬಂದರೂ, ಎರಡು ಹೊತ್ತಿನ ಊಟಕ್ಕಾಗಿ ಹರಸಾಹಸ ಪಡುತ್ತಿದ್ದ ಆರೋಪಿಗಳು ತಮ್ಮ ಭವಿಷ್ಯವನ್ನು ಪಣಕ್ಕಿಟ್ಟು ಹರ್ಷನನ್ನು ಹತ್ಯೆಗೈಯುವಂತೆ ಮಾಡಿದ ಒತ್ತಾಯದ ಬಗ್ಗೆ ಪೊಲೀಸರಿಗೆ ತಿಳಿಯಬೇಕಿದೆ. ಈ ಪ್ರಕರಣದಲ್ಲಿ ಇದುವರೆಗೆ 40 ಎಫ್ಐಆರ್ಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಸಿಫ್ ಹಾಗೂ ಹರ್ಷ ನಡುವೆ 2015ರಿಂದ ತೀವ್ರ ದ್ವೇಷವಿತ್ತು ಎಂದು ಹೇಳಲಾಗುತ್ತಿದೆ. ಈ ಹಳೆಯ ವೈಯಕ್ತಿಕ ದ್ವೇಷ ಇತ್ಯರ್ಥಗೊಳಿಸಲು ಖಾಸಿಫ್ ತನ್ನ ಸ್ನೇಹಿತರ ಸಹಾಯವನ್ನು ಬಳಸಿದ್ದಾನೆಯೇ ಎಂದು ಪೊಲೀಸರು ತಿಳಿದುಕೊಳ್ಳಬೇಕಾಗಿದೆ.
ಹಿಜಾಬ್ ಸಂಬಂಧಿತ ವಿವಾದಕ್ಕೆ ಸಂಬಂಧಿಸಿದಂತೆ ನಗರವು ಉನ್ಮಾದದ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಹರ್ಷ ಅವರು ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದರು ಎನ್ನಲಾಗಿದೆ. ಹಿಜಾಬ್-ಸಂಬಂಧಿತ ವಿವಾದದ ಹಿನ್ನೆಲೆಯಲ್ಲಿ ಹಳೆಯ ದ್ವೇಷವನ್ನು ಇತ್ಯರ್ಥಗೊಳಿಸಲು ಈ ಅವಕಾಶವನ್ನು ಬಳಸಲಾಗಿದೆಯೇ ಎಂಬುದು ಪೊಲೀಸರು ತನಿಖೆ ಮಾಡಲು ಮುಂದಾಗಿದ್ದಾರೆ.
ಹರ್ಷ, ಹಿಂದೂ ಸಂಘಟನೆಗಳ ಭಾಗವಾಗಿರುವುದರಿಂದ ಕೋಮು ಘರ್ಷಣೆಯಲ್ಲಿ ಭಾಗವಹಿಸಿ ಜೈಲು ಪಾಲಾಗಿದ್ದರು. ಕೊಲೆಯಲ್ಲಿ ಕೋಮುವಾದದ ಪಾತ್ರವಿದೆಯೇ ಎಂದು ಪೊಲೀಸರು ತಿಳಿಯಬೇಕಿದೆ.
ಹರ್ಷ ಹಿಂದೂ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಕಾರಣ, ಅವನಿಗೆ ಹಲವಾರು ಶತ್ರುಗಳಿದ್ದರು. ಈ ದ್ವೇಷವನ್ನು ಇತ್ಯರ್ಥಗೊಳಿಸಲು ಖಾಸಿಫ್ ಮತ್ತು ಆತನ ಸಹಚರರು ಈ ರೀತಿ ಮಾಡಿದ್ದಾರಾ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಾಗಿದೆ.
ಹರ್ಷ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಿಂದುತ್ವ ತತ್ವಗಳಿಗೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡ ನಂತರ, ಅವರಿಗೆ ಕೆಲವು ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದಿದ್ದವು. ಈ ಸಂಘಟನೆಗಳು ಹರ್ಷ ಹತ್ಯದಲ್ಲಿ ಭಾಗಿಯಾಗಿದ್ದಾರಾ ಎಂಬುದನ್ನು ಪರಿಶೀಲಿಸಬೇಕಿದೆ.