Wednesday, May 15, 2024
Homeಚಿಕ್ಕಮಗಳೂರುಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಾಗಲು ಗ್ರಾಮ

ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಾಗಲು ಗ್ರಾಮ

spot_img
- Advertisement -
- Advertisement -

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಮಾಗಲು ಗ್ರಾಮವು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದೆ.

ವರಾಹಿ ಹಿನ್ನೀರು ನಲ್ಲಿ ಬರುವ ಗ್ರಾಮ ಇದಾಗಿದ್ದು ಸುಮಾರು 20 ಕುಟುಂಬಗಳು ವಾಸಿಸುತ್ತಿವೆ, ಆದರೆ ಈ ಕುಟುಂಬಗಳ ಪರಿಸ್ಥಿತಿ ತೀರಾ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯವಿಲ್ಲದೆ ಈಗಗಾಗಲೆ 4 ಕುಟುಂಬಗಳು ವಲಸೆ ಹೋಗಿವೆ. ಸುಮಾರು 50 ವರ್ಷದಿಂದ ರಸ್ತೆಗಾಗಿ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದ ಸನ್ನಿವೇಶದಲ್ಲಿ ಯಾವುದೇ ವಾಹನಗಳು ಬರಲಾಗದ ಪರಿಸ್ಥಿತಿ ಊರಿನದ್ದು, ಕಳೆದ 50 ವರ್ಷಗಳಲ್ಲಿ ಆಶ್ವಾಸನೆ ಗಳಿಂದ ಜನರಿಂದ ಮತವನ್ನು ಕೇಳಿರುವುದು ಬಿಟ್ಟರೆ, ಹೇಳಿ ಕೊಳ್ಳುವುದಕ್ಕೂ ಯಾವುದೇ ಅಭಿವೃದ್ಧಿ ಆಗಿಲ್ಲ. ವಯಸ್ಕರು ಆಸ್ಪತೆಗೆ ಹೋಗಬೇಕಾದರೆ ಅಥವಾ ಮಕ್ಕಳು ಶಾಲೆಗಳಿಗೆ ಹೋಗವರಿಗೆ ತುಂಬಾ ಕಷ್ಟದ ಪರಿಸ್ಥಿತಿ ಈ ಊರಿನದ್ದು, ಈ ಸಮಸ್ಯೆಗಳನ್ನು ಪ್ರಧಾಮಂತ್ರಿವರೆಗೂ ಪತ್ರ ಬರೆದು ಅವರ ಗಮನಕ್ಕೆ ತಂದಿದ್ದರು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ಥಳೀಯ ಎಂಜಿನಿಯರ್ ( ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸಾಗರ) ಇವರುಗಳು ನಕಲಿ ಎಸ್ತಿಮೇಷನ್ ಸೃಷ್ಟಿಸಿ ಅನಾವಶ್ಯಕವಾಗಿ 2 ಕೋಟಿ ಎಸ್ತೀಮೇಷನ್ ತೋರಿಸಿರುತ್ತರೆ ಇದೆ ಎಂಜಿನಿಯರ್ ಸ್ಥಳ ಪರಿಶೀಲನೆಗೆ ಬಾರದೆ ಗ್ರಾಮಸ್ಥರ ಗಮನಕ್ಕೂ ತರದೆ ಮೋದಿ ಅವರ ಪತ್ರಕ್ಕೆ FAKE ಎಸ್ತಿಮೇಷನ್ ನೀಡಿರುತ್ತಾರೆ… ಆದ್ದರಿಂದ ಈ ಬಾರಿ ಆಶ್ವಾಸನೆ ಗಳಿಗೆ ಬೇಸತ್ತು ಮಾಗಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. 

ರಾಜಕೀಯ ಪ್ರಮುಖರು ಮತ ಕೇಳುವುದಕ್ಕೆ ಬರುವಾದರೆ ದಯವಿಟ್ಟು ಬರಲೇಬೇಡಿ. ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಯೊಂದಿಗೆ ಬನ್ನಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. 

ಈ ಗ್ರಾಮಕ್ಕೆ ಸುಮಾರು 2.5 km ರಸ್ತೆಯ ಅವಶ್ಯಕತೆ ಇದೆ, ಪ್ರತಿವರ್ಷ ಗ್ರಾಮಸ್ಥರೇ ಸೇರಿ ರಸ್ತೆಗೆ ಮಣ್ಣು ತುಂಬಿಸಿ ರಸ್ತೆ ಮಾಡಿಕೊಂಡರು ಸುರಿಯುವ ಮಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಬರಿ ಕಲ್ಲುಗಳು ರಸ್ತೆಯ ಮೇಲೆ ಉಳಿಯುತ್ತದೆ, ಆ ರಸ್ತೆಯಲ್ಲಿ ವಾಹನವಿರಲಿ ಕಾಲ್ನಡಿಗೆಯಲ್ಲಿ ಕೂಡ ಚಲಿಸಲು ಈ ರಸ್ತೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ರಸ್ತೆ ಜಖಂಗೊಂಡು ವಾಹನಗಳು ಯಾವುದು ಬರುವುದಿಲ್ಲ , ಈ ಎಲ್ಲಾ ವಿಷಯಗಳು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೂ ತಿಳಿದಿದ್ದರು ಅದರಿಂದ ಯಾವುದೇ ಉಪಯೋಗಗಳು ವಾಗಿಲ್ಲ. ಆದ್ದರಿಂದ ಇಷ್ಟು ವರ್ಷಗಳು ಮತ ನೀಡಿಯೂ ಕೂಡ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿರುವುದಿಲ್ಲ ಅದಕ್ಕಾಗಿ ಮಾಗಲಿನ 43 ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುತ್ತಾರೆ. ವಿಪರ್ಯಾಸವೆಂದರೆ ವಾರಾಹಿ ಹಿನ್ನೀರಿಗೆ ಡ್ಯಾಂ ನಿರ್ಮಾಣಕ್ಕೆ ಕಲ್ಲನ್ನು ಇದೆ ಮಾಗಲಿನಿಂದ ಸಾಗಿಸಿಕೊಂಡರು, ಅದೇ  KPC ಅವರ ಕಡೆಯಿಂದಲೂ ನಮಗೆ ರಸ್ತೆ ಮಾಡಿಕೊಡದಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಹಲವು ಬಾರಿ KPC ಎಂಜಿನಿಯರ್ ಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಎಲ್ಲಾ ಗ್ರಾಮಸ್ಥರು ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ ಎಂದು ಮಾಗಲಿನ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!