- Advertisement -
- Advertisement -
ಕೊಪ್ಪಳ : ಜಿಲ್ಲೆಯ ಬನ್ನಿಕಟ್ಟಿ ಏರಿಯಾ ಸಮೀಪ ಟಿಪ್ಪರ ಹರಿದು ಅಜ್ಜಿ ಒಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಸುಶೀಲಮ್ಮ ( 65 ) ಅಪಘಾತದಲ್ಲಿ ಮೃತಪಟ್ಟವರು . ತಾಯಿ ಅಪಘಾತದಲ್ಲಿ ಸಾವನ್ನಪ್ಪಿರುವ ವಿಷಯ ಕೇಳಿ ಮಗ ಸದಾಶಿವ ಕಣ್ಣೀರಿಟ್ಟಿದ್ದಾರೆ. ಸದಾಶಿವ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮುಂಜಾನೆ ವಾಯುವಿಹಾರಕ್ಕೆಂದು ಸುಶೀಲಮ್ಮ ಬಂದಿದ್ದರು . ಇದೇ ವೇಳೆ ಕಾಂಕ್ರೀಟ್ ತುಂಬಿಕೊಂಡು ಕೆಎ 27 ಎ 8983 ನಂಬರ್ನ ಟಿಪ್ಪರ್ ಬಂದು ಅಜ್ಜಿಯ ಮೇಲೆ ಹರಿದಿದೆ. ಟಿಪ್ಪರ್ ನ ಚಕ್ರದ ಕೆಳಗೆ ಸಿಲುಕಿ ಅಜ್ಜಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕೊಪ್ಪಳದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -