- Advertisement -
- Advertisement -
ಮಡಿಕೇರಿ: ನಾಪತ್ತೆಯಾಗಿದ್ದ ಮೊಮ್ಮಗನ ಮೃತದೇಹವನ್ನು ಕಂಡು ಆತನ ಅಜ್ಜಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಡೆದಿದೆ.
ರಮ್ಲಾನ್ ಎಂಬವರ ಪುತ್ರ ಮುಬಶ್ಶಿರ್ (18) ಮೃತ ದುರ್ದೈವಿ. ನಿನ್ನೆ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಮುಬಶ್ಶೀರ್ ಮೃತದೇಹವು ಇಂದು ಬೆಳಗ್ಗೆ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಮೊಮ್ಮಗನ ಮೃತದೇಹವನ್ನು ಕಂಡ ಅಜ್ಜಿಯು ಸ್ಥಳದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -