- Advertisement -
- Advertisement -
ಮೂಡುಬಿದ್ರೆ: ನಗರದ ಹೊರವಲಯದ ಅಶ್ವತ್ಥಪುರಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.
ಶ್ರೀಕ್ಷೇತ್ರ ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀರಾಮ ನವಮಿ ಮಹೋತ್ಸವ ಸಂದರ್ಭದಲ್ಲಿ ಇಂದು ಮುಂಜಾನೆ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಸಂದರ್ಭ ಶ್ರೀದೇವಳಕ್ಕೆ ಭೇಟಿ ನೀಡಿದರು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ರಘುನಾಥ ಎಲ್.ವಿ. ಸಚಿವರನ್ನು ಗೌರವಿಸಿದರು. ಮೊಕ್ತೇಸರರಾದ ಕಿರಣ್ ಮಂಜನಬೈಲು, ದತ್ತಾತ್ರೇಯ ಸುರಾಲು, ಬಿ. ರಂಗನಾಥ ಭಟ್ ಮೊದಲಾದವರಿದ್ದರು.
- Advertisement -