- Advertisement -
- Advertisement -
ಮೈಸೂರು: ಕಾಲಿಗೆ ಶೂ ಧರಿಸಿಕೊಂಡೇ ದಸರಾ ಗಜಪಡೆಗೆ ಇಂದು ಅರಣ್ಯ ಸಚಿವ ಉಮೇಶ್ ಕತ್ತಿ ಪೂಜೆ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಮೈಸೂರು ದಸರಾ ಹಬ್ಬಕ್ಕೆ ಗಜ ಪಯಣ ಆರಂಭದ ವೇಳೆ ಅರಣ್ಯ ಸಚಿವ ಉಮೇಶ್ ಕತ್ತಿ ಪಾಲ್ಗೊಂಡಿದ್ದರು.ಗಜಪಡೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಅಂಬಾರಿ ಆನೆ ಅಭಿಮನ್ಯುಗೆ ಶೂ ಹಾಕಿಕೊಂಡೇ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಗಜಪಡೆಗೆ ಪುಷ್ಪಾರ್ಚನೆ ಮಾಡಿ, ಕಬ್ಬು, ಕಡುಬು ತಿನ್ನಿಸುವಾಗಲೂ ಸಚಿವ ಉಮೇಶ್ ಕತ್ತಿ ಶೂ ಧರಿಸಿಕೊಂಡೇ ಇದ್ದರು.ಜೊತೆಯಲ್ಲಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಚ್.ಪಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಮಂಜೇಗೌಡ ಸೇರಿದಂತೆ ಎಲ್ಲರೂ ಶೂ, ಚಪ್ಪಲಿ ತೆಗೆದು ಪೂಜೆ ಸಲ್ಲಿಸಿದ್ದಾರೆ.ಆದರೆ ಅರಣ್ಯ ಸಚಿವ ಉಮೇಶ್ ಕತ್ತಿ ಮಾತ್ರ ಶೂ ಹಾಕಿಕೊಂಡು ಪೂಜೆ ಸಲ್ಲಿಕೆ ಮಾಡಿದ್ದಾರೆ
- Advertisement -