- Advertisement -
- Advertisement -
ಉಡುಪಿ: ರೈಲು ಢಿಕ್ಕಿ ಹೊಡೆದು ಮೀನುಗಾರರೊಬ್ಬ ಮೃತಪಟ್ಟ ಘಟನೆ ಮಣಿಪಾಲದ ಇಂದ್ರಾಳಿ ಬಳಿ ಇಂದು ಬೆಳಗ್ಗೆ ನಡೆದಿದೆ.ಕೆಂಜೂರು ನಿವಾಸಿ ಸುರೇಶ್ (43) ಮೃತ ದುರ್ದೈವಿ. ಇವರು ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಆ.4ರಂದು ಇವರು ಮನೆಯಿಂದ ಕೆಲಸಕ್ಕೆ ಹೋಗಿದ್ದರು.
ಆದರೆ ನಂತರ ಮನೆಗೆ ಹೋಗದ ಸುರೇಶ್, ಯಾವುದೋ ಕಾರಣಕ್ಕೆ ಇಂದ್ರಾಳಿಗೆ ಹೋಗಿದ್ದರೆನ್ನಲಾಗಿದೆ.ಈ ವೇಳೆ ಮಂಗಳೂರು-ಕುಂದಾಪುರ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಾರ್ಕೂರು ಕಡೆಗೆ ಬರುತ್ತಿರುವಾಗ ರೈಲು ಡಿಕ್ಕಿಯಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -