Thursday, May 16, 2024
Homeತಾಜಾ ಸುದ್ದಿಬಾಲಿವುಡ್ ಹಿರಿಯ ನಟನ ವಿರುದ್ಧ ಎಫ್ ಐಆರ್- ಹಿಂದೂ ಭಾವನೆಗಳಿಗೆ ಧಕ್ಕೆ ತಂದ್ರಾ ಅಮಿತಾಬ್ ಬಚ್ಚನ್?

ಬಾಲಿವುಡ್ ಹಿರಿಯ ನಟನ ವಿರುದ್ಧ ಎಫ್ ಐಆರ್- ಹಿಂದೂ ಭಾವನೆಗಳಿಗೆ ಧಕ್ಕೆ ತಂದ್ರಾ ಅಮಿತಾಬ್ ಬಚ್ಚನ್?

spot_img
- Advertisement -
- Advertisement -

ಮುಂಬೈ: ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ಬರುವಂತಹ ಪ್ರಶ್ನೆ ಕೇಳಲಾಗಿದೆ ಎಂದು ಹೇಳಲಾಗಿದೆ ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಿರೂಪಕ ಹಿರಿಯ ನಟ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.ಈ ಕಾರ್ಯಕ್ರಮ ಬಹಳ ಹೆಸರುವಾಸಿಯಾಗಿದ್ದು ಹಲವು ಭಾಷೆಯಲ್ಲಿ ಮೂಡಿ ಬಂದಿತ್ತು.

ಸೋನಿ ಟಿವಿ ಕಾರ್ಯಕ್ರಮ ಮೇಕರ್ಸ್ ಹಾಗು ಅಮಿತಾಬ್ ಬಚ್ಚನ್ ವಿರುದ್ಧ ದೂರು ದಾಖಲಾಗಿದೆ.ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಸಂಚಿಕೆ ಯೊಂದರಲ್ಲಿ ನಟ ಅನುಪ್ ಸೋನಿ ಮತ್ತು ಸಾಮಾಜಿ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಎಂಬುವರಿಗೆ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯೊಂದು ಸದ್ಯ ವಿವಾದ ಹುಟ್ಟುಹಾಕಿದೆ.

ಅಮಿತಾಬ್ ಡಾ.ಬಿ.ಆರ್. ಅಂಬೇಡ್ಕರ್ ಮತ್ತವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದ್ದರು? ಎಂದು ಪ್ರಶ್ನೆ ಕೇಳಿದ್ದರು.6 ಲಕ್ಷದ 40 ಸಾವಿರ ರೂ. ನಗದು ಬಹುಮಾನದ ಪ್ರಶ್ನೆ ಇದಾಗಿತ್ತು.ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುವುದಲ್ಲದೆ ಪ್ರಕರಣವೂ ದಾಖಲಾಗಿದೆ.

- Advertisement -
spot_img

Latest News

error: Content is protected !!