- Advertisement -
- Advertisement -
ನವದೆಹಲಿ:ಕಳೆದ ೪೦ದಿನಗಳಿಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಕೈಗೊಂಡಿರುವ ಹೋರಾಟ ಮುಂದುವರಿದಿದೆ.ಸಧ್ಯ ರೈತರ ಪ್ರತಿಭಟನಾ ಸ್ಥಳಕ್ಕೆ ನೀರು ನುಗ್ಗಿದೆ. ದೆಹಲಿಯಲ್ಲಿ ಭಾರಿ ಚಳಿ ಮತ್ತು ಮಳೆಯಾಗುತ್ತಿದ್ದು ಮೈಕೊರೆಯುವ ಚಳಿಯಿದ್ದು ರೈತರ ಆರೋಗ್ಯದ ಕುರಿತು ಕಳವಳ ಮೂಡಿದೆ.
ಇಂದು ಮತ್ತೆ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರು ಸಭೆ ನಡೆಯಲಿದ್ದುಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಒಂದು ವೇಳೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ರೈತ ಸಂಘ ಹೇಳಿಕೆ ನೀಡಿದೆ.
- Advertisement -