Tuesday, May 21, 2024
Homeತಾಜಾ ಸುದ್ದಿಜಸ್ಟ್ 200 ರೂಪಾಯಿಯಿಂದ 60 ಲಕ್ಷ ಪಡೆದ ರೈತ: ಅಷ್ಟಕ್ಕೂ ಅನ್ನದಾತನಿಗೆ ಅದೃಷ್ಟ ಖುಲಾಯಿಸಿದ್ದು...

ಜಸ್ಟ್ 200 ರೂಪಾಯಿಯಿಂದ 60 ಲಕ್ಷ ಪಡೆದ ರೈತ: ಅಷ್ಟಕ್ಕೂ ಅನ್ನದಾತನಿಗೆ ಅದೃಷ್ಟ ಖುಲಾಯಿಸಿದ್ದು ಹೇಗೆ?

spot_img
- Advertisement -
- Advertisement -

ಮಧ್ಯಪ್ರದೇಶ: ಇಲ್ಲಿನ ರೈತನೊಬ್ಬ ರಾತ್ರೋರಾತ್ರಿ ಶ್ರೀಮಂತನಾಗಿದ್ದಾರೆ. ಅದು ಕೇವಲ 200 ರೂಪಾಯಿಂದ. ಅದು ಹೇಗೆ ಅಂತಾ ಯೋಚಿಸ್ತಿದ್ದೀರಾ ಅಲ್ಲೇ ಇರೋದು ಇಂಟರೆಸ್ಟಿಂಗ್ ವಿಚಾರ..

45 ವರ್ಷದ ಲಖನ್​ ಯಾದವ್​ ಎಂಬ ರೈತ ಕಳೆದ ತಿಂಗಳು 200 ರೂಪಾಯಿಗೆ ಭೂಮಿಯನ್ನು ಗುತ್ತಿಗೆ ಪಡೆದಿದ್ದಾರೆ. ಗುತ್ತಿಗೆ ಪಡೆದಿದ್ದ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಲಖನ್​ಗೆ ಬೆಣಚುಕಲ್ಲು ಮಾದರಿಯ ವಸ್ತು ಪತ್ತೆಯಾಗಿದೆ. ಅದನ್ನ ಉಜ್ಜಿ ನೋಡಿದಾಗ ವಜ್ರದಂತೆ ಹೊಳೆದಿದೆ. ಬಳಿಕ ಇದನ್ನ ಜಿಲ್ಲಾ ವಜ್ರ ಕಚೇರಿಗೆ ತೆಗೆದುಕೊಂಡು ಹೋದ ವೇಳೆ ಇದು ನಿಜವಾದ ವಜ್ರ ಅನ್ನೋದು ಕನ್ಫರ್ಮ್ ಆಗಿದೆ.

ಭೂಮಿಯಿಂದ ಇವರು 14.98 ಕ್ಯಾರೆಟ್​ ವಜ್ರವನ್ನ ಶೋಧಿಸಿದ್ದಾರೆ. ಈ ವಜ್ರದ ಬೆಲೆ 60.6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ವಜ್ರ ಪತ್ತೆಯಾದ ಬಗ್ಗೆ ಮಾತನಾಡಿದ ಲಖನ್​, ಈ ವಜ್ರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಈ ಹಣವನ್ನ ಈಗ ಖರ್ಚು ಮಾಡೋದಿಲ್ಲ. ನನಗೆ ನಾಲ್ವರು ಮಕ್ಕಳಿದ್ದು ಆ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಈ ಹಣವನ್ನ ಕೂಡಿಡುತ್ತೇನೆ ಎಂದು ಹೇಳಿದ್ದಾರೆ.

ವಜ್ರ ಮಾರಿ ಸಿಕ್ಕ ಹಣದಿಂದ ಲಖನ್ ಎರಡು ಎಮ್ಮೆ ಹಾಗೂ ಒಂದು ಮೋಟಾರ್​ ಸೈಕಲ್​ ಖರೀದಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!