Saturday, May 11, 2024
Homeಕರಾವಳಿಬರ್ತ್ ಡೇ ಆಚರಣೆ ವೇಳೆ ಕ್ಷೀರಾಭಿಷೇಕ ಮಾಡಿಸಿಕೊಂಡ ಮಾಜಿ ಶಾಸಕ!

ಬರ್ತ್ ಡೇ ಆಚರಣೆ ವೇಳೆ ಕ್ಷೀರಾಭಿಷೇಕ ಮಾಡಿಸಿಕೊಂಡ ಮಾಜಿ ಶಾಸಕ!

spot_img
- Advertisement -
- Advertisement -

ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹುಟ್ಟು ಹಬ್ಬಕ್ಕೆ ಕ್ಷೀರಾಭಿಷೇಕ ಮಾಡಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ಕ್ಷೀರಾಭಿಷೇಕ ನಡೆದಿದೆ.

ಕೇಕ್ ಕತ್ತರಿಸಿ ಹಾರ ಹಾಕಿ ಹೆಗಲ ಮೇಲೆ ಹೊತ್ತು ಬೆಂಬಲಿಗರು ಹಾಲಿನ ಅಭಿಷೇಕ ಮಾಡಿದ್ದಾರೆ.

ಅರಕೆರೆ ಗ್ರಾಮಸ್ಥರು ಗ್ರಾಮದಾದ್ಯಂತ ಮಾಜಿ ಶಾಸಕರ ಬರ್ತ್ ಡೇ ಆಚರಣೆಯನ್ನು ಬಲು ಜೋರಾಗಿ ನಡೆಸಿದ್ದಾರೆ.

2013ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿದ್ದ ರಮೇಶ್ ಬಂಡಿಸಿದ್ದೇಗೌಡ 2018 ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು‌.

- Advertisement -
spot_img

Latest News

error: Content is protected !!