Thursday, May 16, 2024
Homeತಾಜಾ ಸುದ್ದಿಬಿಜೆಪಿಯವರು ರಕ್ತ ಬೀಜಾಸುರರು, ಬಿಜೆಪಿ ರಕ್ತದಾಹವನ್ನು ಕಾಂಗ್ರೆಸ್ ಹುಟ್ಟಡಗಿಸುತ್ತದೆ; ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿಕೆ

ಬಿಜೆಪಿಯವರು ರಕ್ತ ಬೀಜಾಸುರರು, ಬಿಜೆಪಿ ರಕ್ತದಾಹವನ್ನು ಕಾಂಗ್ರೆಸ್ ಹುಟ್ಟಡಗಿಸುತ್ತದೆ; ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿಕೆ

spot_img
- Advertisement -
- Advertisement -

ಚಿಕ್ಕಬಳ್ಳಾಪುರ: ಬಿಜೆಪಿಯವರು ರಕ್ತ ಬೀಜಾಸುರರು, ಬಿಜೆಪಿಯವರಿಗೆ ರಕ್ತ ದಾಹ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಮೊಯಿಲಿ, ಬಿಜೆಪಿಯ ರಕ್ತದಾಹವನ್ನು ಕಾಂಗ್ರೇಸ್ ನವರು ಹುಟ್ಟಡಗಿಸುತ್ತೇವೆ ಎಂದು ಹೇಳಿದ್ದಾರೆ. ‌

ಇದೇ ವೇಳೆ, ಪ್ರತಿದಿನ ಕೋಮು ಸಂಘರ್ಷಕ್ಕೆ ಬಿಜೆಪಿಯವರು ನಾಂದಿ ಹಾಡುತ್ತಿದ್ದಾರೆ ಎಂದಿರುವ ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಕೂಡಾ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ತಾವು ಎಂಥಾ ದುಷ್ಟ ಮುಖ್ಯಮಂತ್ರಿ ಅಂಥ ತಾವೇ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ ಎಂದಿರುವ ಮೊಯ್ಲಿ, ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಕುಮಾರಸ್ವಾಮಿಯೇ ಒಳಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ‌

ಅಲ್ಲದೇ ಕುಮಾರಸ್ವಾಮಿ ತಾವೇ ಮೀರ್ ಸಾಧೀಕ್ ಅಂತ ಹೆಗಲು ಮುಟ್ಟಿಕೊಂಡು ನೋಡಿದ್ದಾರೆ ಎಂದು ಹೇಳಿರುವ ಮಾಜಿ‌ ಸಿಎಂ ಮೊಯ್ಲಿ, ಪ್ರಧಾನಿ ಮೋದಿ ಆಡಳಿತ ದುರಂತದ ಕಾಲ ಅಂತ ಮುಂದೊಂದು ದಿನ ಇತಿಹಾಸ ಕಾರರು ಬರೆಯುತ್ತಾರೆ‌ ಎಂದು ವ್ಯಂಗ್ಯವಾಡಿದ್ದಾರೆ.

- Advertisement -
spot_img

Latest News

error: Content is protected !!