- Advertisement -
- Advertisement -
ಕುಂದಾಪುರ:ಇಲ್ಲಿನ ಎಂಕೋಡಿ ಬೀಚ್ನಲ್ಲಿ ಈಜುತ್ತಿದ್ದವರು ನೀರಲ್ಲಿ ಮುಳುಗಿದ್ದು,ಒಬ್ಬಾತ ಸಾವನ್ನಪ್ಪಿದರೆ ಮತ್ತೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆ ಮಧ್ಯಾಹ್ನ ಸಂಭವಿಸಿದ್ದು,ಮೃತನನ್ನು ಬೆಳಗಾವಿ ಜಿಲ್ಲೆಯ ನಳಗುಂದ ತಾಲೂಕಿನ ಮಂಜು (38) ಎಂದು ಗುರುತಿಸಲಾಗಿದೆ.
ಮಂಜು ಹಾಗೂ ಮತ್ತೋರ್ವ ವ್ಯಕ್ತಿ ಈಜಲೆಂದು ಸಮುದ್ರಕ್ಕಿಳಿದಿದ್ದು, ಈ ವೇಳೆ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ. ಮಂಜು ಸಾವನ್ನಪ್ಪಿದರೆ, ಮತ್ತೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ.ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ.
- Advertisement -