Saturday, April 27, 2024
Homeಕರಾವಳಿಉಡುಪಿಉಡುಪಿ: ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ: ತೀವ್ರ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆಗೂ ಮೊದಲೇ ಸಾವು

ಉಡುಪಿ: ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ: ತೀವ್ರ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆಗೂ ಮೊದಲೇ ಸಾವು

spot_img
- Advertisement -
- Advertisement -

ಉಡುಪಿ, ಮೇ 12: ವೃದ್ಧೆಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ್ದು ಬಳಿಕ ಅವರು ಸಾವನ್ನಪ್ಪಿದ ಘಟನೆ ಜೋಡುಕಟ್ಟೆಯಲ್ಲಿ ನಡೆದಿದೆ. ಜೋಡುಕಟ್ಟೆಯ ಜ್ಯಾಕಲೀನ್ ಡೇಸಾ ಅವರೊಂದಿಗೆ ವಾಸವಿದ್ದ ಅವರ ತಾಯಿ ಬಿ.ವಿ.ಡೇಸಾ (82) ಮೃತರು. ಅವರಿಗೆ ಮೇ 8ರಂದು ಬಿ.ವಿ.ಬಲ್ಲಾಳ್ ಹಾಗೂ ಮನೆಯವರು ಕಟ್ಟಿಗೆ ಮತ್ತು ಆಯುಧಗಳಿಂದ ಹಲ್ಲೆ ಮಾಡಿದ್ದರು. ಅದರ ಆಘಾತದಿಂದಾಗಿ ಮೇ 11ರಂದು ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳಿಗೆ ಮೇಬಲ್ ಸುಮಿತ್ರಾ ಮತ್ತು ಕುಟುಂಬದವರು, ಮೆರ್ಲಿನ್ ಮತ್ತು ಅವಳ ಗಂಡ, ಪರಮೇಶ್ವರ, ಮಲ್ಲಿಕಾ ಭಂಡಾರಿ ಮತ್ತು ಅವರ ಕುಟುಂಬದವರು ಹಾಗೂ ಬಾಡಿಗೆದಾರರು, ಅಬ್ದುಲ್ ಅಝೀಝ್ ಮತ್ತು ಕುಟುಂಬದವರು, ಉಷಾ ಯೋಗಿಂದ್ರನಾಥ್, ಸಂದೀಪ್ ಮತ್ತು ಕುಟುಂಬದವರು, ಓರ್ವ ಅಪರಿಚಿತ ಮಹಿಳೆ ಮತ್ತು ಇತರರು ಸಹಕಾರ ನೀಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!