- Advertisement -
- Advertisement -
ಕೇರಳ: ಕಣ್ಣೂರು ಜಿಲ್ಲೆಯ ವಳಪಟ್ಟಣಂ ಬಳಿಯಲ್ಲಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಹೆಬ್ಬಾವಿನೊಂದಿಗೆ ಫೋಟೊ ತೆಗೆಯಲು ಹೋದ ಘಟನೆ ನಡೆದಿದೆ.
ಚಂದ್ರನ್ ಎಂಬ ವ್ಯಕ್ತಿಯು ಮದ್ಯದ ಅಮಲಿನಲ್ಲಿದ್ದು, ಹೆಬ್ಬಾವಿನೊಂದಿಗೆ ತನ್ನ ಫೋಟೊ ಕ್ಲಿಕ್ಕಿಸುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾನೆ. ಅದರೆ ಆತ ಕುಡಿದ ಮತ್ತಿನಲ್ಲಿದ್ದ ಕಾರಣ ಎನೂ ಅರಿವಿಲ್ಲದ ಆತ ಹೆಬ್ಬಾವಿನ ಜೊತೆ ಫೋಟೊ ತೆಗೆಯುವಾಗ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಂಡಿದೆ.
ಈ ಸಂದರ್ಭದಲ್ಲಿ ಆತ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದು, ಅದಾಗಲೇ ಪೆಟ್ರೋಲ್ ಬಂಕ್ ಸಿಬ್ಬಂದಿ ಗೋಣಿ ಚೀಲ ತಂದು ಹೆಬ್ಬಾವನ್ನು ಗೋಣಿಗೆ ತುಂಬಿಸಲು ಪ್ರಯತ್ನಿಸಿದರು ಆಗ ಹೆಬ್ಬಾವು ಓಡಿದೆ. ಪರಿಸ್ಥಿತಿ ಗಂಭೀರವಾದರಿಂದ ಆತ ಅಲ್ಲೇ ಬಿದ್ದುಬಿಟ್ಟ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಅಭಿಷೇಕ್ ತಿಳಿಸಿದರು.
- Advertisement -