- Advertisement -
- Advertisement -
ಚಿಕ್ಕಬಳ್ಳಾಪುರ: ಕುಟುಂಬದಲ್ಲಿ ಜಗಳ ಹಿನ್ನಲೆ ಮನೆಯಲ್ಲಿ ಹೆಂಡತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದ ಗಂಡನ ಮನೆಯಲ್ಲಿ ನವ್ಯಾ ಎಸ್.ಆರ್ (23) ಮೃತಪಟ್ಟಿದ್ದಾಳೆ. ವರದಕ್ಷಣೆ ಕಿರುಕುಳ ನೀಡಿ ನೇಣು ಹಾಕಿರುವುದಾಗಿ ಆರೋಪ ಮಾಡಲಾಗಿದೆ.
ನವ್ಯಾ ಪತಿ ಚೇತನ್ ಕುಮಾರ್ಗೆ ಮೃತಳ ಸಂಬಂಧಿಗಳು ಥಳಿಸಿದ್ದಾರೆ. ಮಹಿಳೆಯರ ಕೈಯಿಂದ ಚೇತನ್ ಕುಮಾರ್ನನ್ನು ಬಿಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಮಗಳ ಸಾವಿನ ಸುದ್ದಿಯನ್ನು ಕೇಳಿ ತಂದೆ ಎಂ.ರಾಮಚಂದ್ರಪ್ಪ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೃತಳ ತಂದೆ ತಾಯಿಯಿಂದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -