Monday, April 29, 2024
Homeಕರಾವಳಿಮಂಗಳೂರು :ಜಿಲ್ಲೆಯ ಗಡಿಭಾಗದ ಮದ್ಯದಂಗಡಿ ವ್ಯವಹಾರ ನಿರ್ಬಂಧ ತೆರವು

ಮಂಗಳೂರು :ಜಿಲ್ಲೆಯ ಗಡಿಭಾಗದ ಮದ್ಯದಂಗಡಿ ವ್ಯವಹಾರ ನಿರ್ಬಂಧ ತೆರವು

spot_img
- Advertisement -
- Advertisement -

ಮಂಗಳೂರು : ಜಿಲ್ಲೆಯ ಗಡಿಭಾಗದಲ್ಲಿರುವ ಮದ್ಯದಂಗಡಿಗಳಿಗೆ ನಿಗದಿಪಡಿಸಲಾದ ಅವಧಿಯಂತೆ ವ್ಯವಹಾರ ನಡೆಸಲು ಅನುಮತಿ ನೀಡಿ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.


ಪ್ರಸಕ್ತವಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹಾಗೂ ಪ್ರಕರಣಗಳು ನಿಯಂತ್ರಣದಲ್ಲಿರುವುದರಿಂದ ಈಗಾಲೇ ಜಿಲ್ಲೆಯಲ್ಲಿ ಇತರೆ ಮದ್ಯದಂಗಡಿಗಳು ನಿಗದಿತ ಅವಧಿಯವರೆಗೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ತಾಲೂಕು ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿರುವ 19 ಗ್ರಾಮಗಳ ಮದ್ಯದಂಗಡಿಗಳಿಗೆ ರಜಸ್ವದ ಹಿತದೃಷ್ಟಿಯಿಂದ 2021ರ ಸೆಪ್ಟಂಬರ್ 18ರಂದು ಹೊರಡಿಸಲಾದ ಆದೇಶವನ್ನು ಹಿಂಪಡೆದು, ಸನ್ನದಿನಲ್ಲಿ ನಿಗದಿಪಡಿಸಲಾದ ಅವಧಿಯಂತೆ ವ್ಯವಹಾರ ನಡೆಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!