- Advertisement -
- Advertisement -
ಚಿತ್ರದುರ್ಗ; ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳು ಪ್ರೀತಿಸಿದ ಹುಡುಗನ ಜೊತೆ ಓಡಿಹೋದ ಕಾರಣಕ್ಕೆ ತಾಯಿ ಮನೆಯಲ್ಲಿ ಬೆಳೆಸಿದ ಮೇಕೆಗೆ ಸೀಮಂತ ಕಾರ್ಯ ಮಾಡಿದ ಚಿತ್ರದುರ್ಗದಲ್ಲಿ ನಡೆದಿದೆ.
ಟಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಗೀತಾರಾಜು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೇ ಮಗಳು ಯಾರನ್ನೋ ಪ್ರೀತಿಸಿ ಮನೆಯವರ ವಿರೋಧವನ್ನೂ ಲೆಕ್ಕಿಸದೇ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಇದರಿಂದ ಬೇಸರಗೊಂಡ ತಾಯಿ ಗೀತಾ ಮನೆಯಲ್ಲಿ ಸಾಕಿದ ಮೇಕೆಗೆ ಸೀಮಂತ ಮಾಡಿ ತಾಯಿ ಪ್ರೀತಿಯನ್ನ ಧಾರೆ ಎರೆದಿದ್ದಾರೆ.
ಮೂಲತಃ ಹಾಸನ ಜಿಲ್ಲೆಯವರಾದ ರಾಜು ಕಲಾವಿದರು. ಮೊದಲಿನಿಂದಲೂ ಗಿಡ ಮರಗಳನ್ನು ಬೆಳೆಸುವ, ಪ್ರಾಣಿಗಳನ್ನು ಸಾಕುವ ಹವ್ಯಾಸ ಹೊಂದಿದ್ದಾರೆ. ಎರಡನೇ ಮಗಳಿಗೂ ಕೂಡ ಪ್ರಾಣಿಗಳೆಂದರೆ ಪಂಚ ಪ್ರಾಣ.
ಮೊದಲ ಮಗಳಿಗೆ ಮಾಡಬೇಕಿದ್ದ ಸೀಮಂತ ಕಾರ್ಯವನ್ನು ಪ್ರೀತಿಯಿಂದ ಸಾಕಿದ ಮೇಕೆಗೆ ಮಾಡಿದ್ದಾರೆ. ಬಂಧು ಬಳಗವನ್ನು ಕರೆದು ಸಿಹಿ ಊಟ ಹಾಕಿಸಿದ್ದಾರೆ.
- Advertisement -