ಬೆಳ್ತಂಗಡಿ: ಕಳೆದ ಮೇ 3ರಂದು ಧರ್ಮಸ್ಥಳ ಸಿ ಎ ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ರವೀಂದ್ರನ್ ಇವರು ಬ್ಯಾಂಕಿನ ಸಭಾಂಗಣದಲ್ಲಿ ನೇಣಿಗೆ ಶರಣಾಗಿದ್ದು, ಒಬ್ಬ ನಿಷ್ಟಾವಂತ ಅಧಿಕಾರಿಯಾದ ಇವರು ಕಳೆದ 46 ವರ್ಷಗಳಿಂದ ಸಂಘದ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ದುಡಿದವರು. ಆದರೆ ಇತ್ತೀಚೆಗೆ ಅವರು ಸಂಘದ ಕೆಲ ನಿರ್ಧೇಶಕರಿಂದ ಮಾನಸೀಕ ಕಿರುಕುಳ ಅನುಭವಿಸುತ್ತಿದ್ದು ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಕೂಡ ಅವರ ಡೆತ್ ನೋಟಿನಲ್ಲಿ ಬರೆದಿದ್ದಾರೆ, ಇವರಿಗೆ ಹುದ್ದೆಯನ್ನು ತ್ಯಜಿಸುವಂತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ ಇಹಲೋಕವನ್ನೆ ತ್ಯಜಿಸುವಂತೆ ಮಾಡಿದವರನ್ನು ಮಾತ್ರವಲ್ಲದೆ ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರುವುದರ ಬಗ್ಗೆಯೂ ಕೇಳಿ ಬರುತ್ತಿದ್ದು ಆದ್ದರಿಂದ ಅವರ ಡೆತ್ ನೋಟನ್ನು ಪರಿಗಣಿಸಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಇಂತಹ ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲವಾದೀತು ಒಂದು ವೇಳೆ ಇದರ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕವು ಉಗ್ರ ಹೋರಾಟವನ್ನು ಮಾಡಲಿದೆ ಎಂದು ಘಟಕದ ಅಧ್ಯಕ್ಷರಾದ ಎಂ.ಕೆ ಪ್ರಸಾದ್ ಪತ್ರಿಕಾ ಪ್ರಕಟನೆಯಲಿ ತಿಳಿಸಿದ್ದಾರೆ
ಧರ್ಮಸ್ಥಳ ಸಿಎ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣ: ಸೂಕ್ತ ತನಿಖೆಗಾಗಿ ಯುವವಾಹಿನಿ ಬೆಳ್ತಂಗಡಿ ಘಟಕ ಆಗ್ರಹ
- Advertisement -
- Advertisement -
- Advertisement -