ಬೆಳ್ತಂಗಡಿ: ಸವಣಾಲು ಘಟಕದ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಮತ್ತು ರಾಮ್ ಸೇನಾ ಬೈರವ ಘಟಕ ಹಾಗೂ ಬೆಳ್ತಂಗಡಿ ತಾಲೂಕಿನ ವೈದ್ಯಕೀಯ ಪ್ರಕೋಷ್ಠ ಇವರ ಜಂಟಿ ಆಶ್ರಯದಲ್ಲಿ ಇದೇ ಬರುವ ಜುಲೈ 10 ಭಾನುವಾರದಂದು ಹಮ್ಮಿಕೊಂಡಿರುವ ‘ಉಚಿತ ದಂತ ಚಿಕಿತ್ಸಾ ಶಿಬಿರ’ವು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಸವಾಣಲಿನ ನಡ್ತಿಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಘಟಕದ ಅಖಿಲ ಕರ್ನಾಟಕ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ಉದ್ಘಾಟನೆಯನ್ನು ಹೇರಾಜೆ ಲ.ರಘುರಾಮ ಗಾಂಭಿರ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುರಳೀಧರ ಭಟ್ ವಕೀಲರು, ರಾಜಕೇಸರಿ ಸವಣಾಲು ಘಟಕದ ಅಧ್ಯಕ್ಷರು ಪದ್ಮಪ್ರಸಾದ್, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ಹರಿಣಾಕ್ಷಿ, ದ.ಕ ರಾಮ್ ಸೇನಾ ಉಪಾಧ್ಯಕ್ಷರು, ಲೋಕೇಶ್ ರಾವ್, ಸವಣಾಲು ರಾಮ್ ಸೇನಾಆ ಬೈರವ ಘಟಕದ ಅಧ್ಯಕ್ಷರು ಚಿದಾನಂದ ಶೆಟ್ಟಿ, ಬೆಳ್ತಂಗಡಿ ತಾಲೂಕು ವೈದ್ಯಕೀಯ ಪ್ರಕೋಷ್ಠ ಸಂಚಾಲಕರು ಎಂ.ಎಂ ದಯಾಕರ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರು ಮನೋರಮ ಭಟ್, ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯರು ಜಿ. ಮಂಜುನಾಥ, ಬೆಳ್ತಂಗಡಿ ರಾಜಕೇಸರಿ ಅಧ್ಯಕ್ಷರು ನಾಗೇಶ ಬಿ. ಅವರು ಉಪಸ್ಥಿತರಿರುವರು.
ಶಿಬಿರದ ವಿಶೇಷತೆ: ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ಸಿಮೆಂಟ್ ಮತ್ತು ಸಿಲ್ವರ್ ತುಂಬಿಸುವುದು, ಹಲ್ಲುಗಳನ್ನು ಕೀಳುವುದು
ಹೆಚ್ಚಿನ ಮಾಹಿತಿಗಾಗಿ ಪದ್ಮಪ್ರಸಾದ್ ಸವಣಾಲು- 8105085850, ಚಿದಾನಂದ ಶೆಟ್ಟಿ, ಸವಣಾಲು-9448594092, ದೀಪಕ್ ಜಿ. ಬೆಳ್ತಂಗಡಿ ಸಂಸ್ಥಾಪಕರು ಅಖಿಲ ಕರ್ನಾಟಕ ರಾಜ ಕೇಸರಿ- 9901947498