- Advertisement -
- Advertisement -
ಬೆಂಗಳೂರು;ವಿಧಾನಸೌಧದ ಅಗ್ನಿಶಾಮಕ ಕಚೇರಿಯ ನೀರಿನ ಸಂಪಿನಲ್ಲಿ ಮೃತ ದೇಹವೊಂದು ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ನಿರ್ವಹಣೆಯ ಪಂಪ್ ಹೌಸ್ ಸಮೀಪದ ಸಂಪ್ನಲ್ಲಿ ಶವ ಸಿಕ್ಕಿದೆ. ಅಪರಿಚಿತ ಶವ ಕಂಡು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಪೈಪ್ ಮೂಲಕ ಸಂಪ್ ನ ಒಳಗಿನ ನೀರನ್ನು ಹೊರ ತೆಗೆಯಲು ಮುಂದಾಗಿದ್ದಾರೆ. ಸ್ಥಳಕ್ಕೆ ವಿಧಾನಸೌಧ ಪೊಲೀಸರು,ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -