- Advertisement -
- Advertisement -
ಬೆಂಗಳೂರು : ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೂನ್ 11 ರಂದು ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.ಆದರೆ ಇಂದಿಗೆ ದರ್ಶನ್ ಅವರನ್ನು ಬಂಧಿಸಿ 9 ದಿನವಾದ್ರೂ ಯಾರೊಬ್ಬರು ಅವರ ಕುಟುಂಬದಿಂದ ಅವರನ್ನು ಭೇಟಿಯಾಗಲು ಠಾಣೆಗೆ ಬಂದಿರಲಿಲ್ಲ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಇರುವ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬಂದಿದ್ದಾರೆ.
, ಪೊಲೀಸರು ಅವರನ್ನು ದರ್ಶನ್ ರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಸದ್ಯ ದರ್ಶನ್ ಅವರನ್ನು ಮಾತನಾಡಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ದರ್ಶನ್ ಅವರ ಪರವಾಗಿ ವಕಾಲತ್ತು ವಹಿಸಲು ಹಿರಿಯ ವಕೀಲರೊಬ್ಬರನ್ನು ವಿಜಯಲಕ್ಷ್ಮೀ ಅವರು ನೇಮಿಸಲಿದ್ದಾರೆ ಎನ್ನಲಾಗಿದೆ.
- Advertisement -