- Advertisement -
- Advertisement -
ಬೆಂಗಳೂರು:ನಟ ದರ್ಶನ್ ಇಲ್ಲಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಿಂದ ಸುಮಾರು 10 ಮಂದಿ ತಮ್ಮ ಸ್ನೇಎಹಿತರ ಜತೆಗೆ ಮಡಿಕೇರಿಗೆ ಬೈಕ್ ಸವಾರಿ ಹೊರಟಿದ್ದಾರೆ.ಸಿಂಪಲ್ ಬದುಕನ್ನು ಪ್ರೀತಿಸುವ ದರ್ಶನ್ ಈ ಹಿಂದೆ ಟೀ ಕುಡಿಯೋ ನೆಪ ಮಾಡಿಕೊಂಡು ಮೈಸೂರಿನಿಂದ ಊಟಿಗೆ ಬೆಳಂಬೆಳಗ್ಗೆ ಬೈಕ್ ಹತ್ತಿ ಹೋಗಿದ್ದರು.
ಬೈಕ್ ಸವಾರಿ ಎಂದರೆ ಅವರಿಗೆ ಪಂಚ ಪ್ರಾಣ. ಉಮಾಪತಿ,ಶ್ರೀನಿವಾಸ್ಗೌಡ, ಪ್ರಜ್ವಲ್ ದೇವರಾಜ್, ನಿರಂಜನ್, ಪ್ರಣಾಮ್ ದೇವರಾಜ್, ಯಶಸ್ ಸೂರ್ಯ, ಪನ್ನಗಭರಣ ಇದ್ದ ತಂಡದ ಜತೆ ರೈಡಿಂಗ್ ಹೊರಟು ಅಭಿಮಾನಿಳಿಗೆ ದಾರಿಯಲ್ಲೆಲ್ಲಾ ಫೋಟೋ ತಗೆಯಲು ಅವಕಾಶ ನೀಡಿ ತಾವು ಸಂಭ್ರಮಿಸಿದರು.ಗೆಳೆಯರ ಜತೆ ಅದ್ದೂರಿ ಬೈಕ್ನಲ್ಲಿ ನ.17ರಂದು ರೈಡಿಂಗ್ ಹೋಗಿದ್ದು ಮಡಿಕೇರಿ ಸೊಬಗು ಸವಿದಿದ್ದಾರೆ.
- Advertisement -