- Advertisement -
- Advertisement -
ಬೆಂಗಳೂರು: ಆರ್ಆರ್ ನಗರ ಚುನಾವಣೆ ನಂತರ ನಟ ದರ್ಶನ್ ಪ್ರಚಾರ ಕಾರ್ಯದಿಂದ ವಿರಾಮ ಪಡೆದಿದ್ದಾರೆ.ಅವರು ರಾಜಕಾರಣಿ, ನಟ ಬಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಸಂದರ್ಭ ಇಬ್ಬರೂ ಕೆಲವು ಸಮಯಗಳ ಕಾಲ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಈ ಭೇಟಿಯ ನಂತರ ಅಭಿಮಾನಿಗಳ ವಲಯದಲ್ಲಿ ಇಬ್ಬರೂ ಸೇರಿ ಯಾವುದೋ ಥ್ರಿಲ್ಲಿಂಗ್ ವಿಚಾರವನ್ನು ಹಂಚಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ.
ಈಗಾಗಲೇ ಆರ್ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ್ದ ದರ್ಶನ್ಗೆ ರಾಜಕೀಯ ನಾಯಕ ಬಿ.ಸಿ. ಪಾಟೀಲ್ ಸಾತ್ ಕೊಟ್ಟಿದ್ದರು. ಅಲ್ಲದೆ ರಾಜಕೀಯ,ಸಿನಿರಂಗದಾಚೆಗೂ ಇವರಿಬ್ಬರ ಸಂಭಂದ ಬಹಳಷ್ಟು ಗಟ್ಟಿಯಾಗಿದೆ. ಆದರೆ ದರ್ಶನ ಹೇಳಿರುವ ಪ್ರಕಾರ ಇದೊಂದು ಸಾಮಾನ್ಯ ಭೇಟಿಯಾಗಿದ್ದು ಸಂತೋಷದಾಯಕವಾಗಿತ್ತು ಎಂದು ತಿಳಿಸಿದ್ದಾರೆ.
- Advertisement -